ಕಾಂಮ್ರೆಡ್ ಗೋವಿಂದ್ ಪನ್ಸಾರೆ ಕೊಲೆ ಪ್ರಕರಣ

ಕೊಲ್ಲಾಪುರ – ಕಾಂ. ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ದೋಷಾರೋಪಣೆ ಸಂಖ್ಯೆ 3,4 ಮತ್ತು 5 ರಲ್ಲಿ ಶಂಕಿತ ಡಾ. ವೀರೇಂದ್ರಸಿಂಗ್ ತಾವಡೆ ಮುಖ್ಯ ಮಾಸ್ಟರ್ ಮೈಂಡ್ ಎಂಬುದಕ್ಕೆ ಹಲವು ಪುರಾವೆಗಳಿವೆ. ಡಾ. ತಾವಡೆ ಇವರೇ ಕೊಲೆಯ ಸಂಚು ರೂಪಿಸಿದರು, ಹಂತಕರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವುದು, ಅವರಿಗೆ ತರಬೇತಿ ನೀಡುವುದು ಇತ್ಯಾದಿಗಳನ್ನು ಮಾಡಿದ್ದಾನೆ. ಡಾ. ತಾವಡೆ ಜಾಮೀನಿನ ಮೇಲೆ ಹೊರಗಿದ್ದರೆ, ಅವರು ಸಾಕ್ಷಿಗಳ ಮೇಲೆ ಒತ್ತಡ ಹೇರಬಹುದು, ಸಾಕ್ಷ್ಯವನ್ನು ಹಾಳುಮಾಡಬಹುದು. ಹಾಗಾಗಿ ‘ಡಾ. ವೀರೇಂದ್ರ ಸಿಂಗ್ ತಾವಡೆ ಇವರ ಜಾಮೀನು ಅರ್ಜಿ ರದ್ದುಗೊಳಿಸಬೇಕು’, ಎಂದು ವಿಶೇಷ ಸರ್ಕಾರಿ ವಕೀಲ ಹರ್ಷದ್ ನಿಂಬಾಳ್ಕರ್ ಅವರು ಯುಕ್ತಿವಾದ ಮಂಡಿಸಿದರು.
ಕಾಂ. ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್. ಎಸ್. ತಾಂಬೆಯವರಲ್ಲಿ ನಡೆಯುತ್ತಿದೆ. ಸರ್ಕಾರದ ಪರವಾಗಿ ಶಿವಾಜಿರಾವ್ ರಾಣೆ ಉಪಸ್ಥಿತರಿದ್ದರು. ಈ ಪ್ರಕರಣದಲ್ಲಿ ಶಂಕಿತರ ಪರವಾಗಿ ವಕೀಲ ಸಮೀರ್ ಪಟವರ್ಧನ್ ಮತ್ತು ವಕೀಲೆ ಪ್ರೀತಿ ಪಾಟೀಲ್ ಹಾಜರಿದ್ದರು. ಕಾಂ. ಗೋವಿಂದ್ ಪನ್ಸಾರೆ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯ ಡಾ. ವೀರೇಂದ್ರ ಸಿಂಗ್ ತಾವಡೆಗೆ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದಲ್ಲಿ ಜಾಮೀನು ರದ್ದುಗೊಳಿಸುವಂತೆ ಸರ್ಕಾರಿ ಕಕ್ಷಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಅರ್ಜಿ ಹಿಂಪಡೆದ ಬಳಿಕ ಸರಕಾರಿ ಪಕ್ಷದ ಪರವಾಗಿ ಡಾ. ತಾವಡೆ ಅವರಿಗೆ ಜಾಮೀನು ನೀಡುವಂತೆ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಮೇ 9ರಂದು ಸರ್ಕಾರಿ ವಕೀಲರ ವಾದ ಮುಗಿದಿತ್ತು. ಈ ಪ್ರಕರಣದ ಮುಂದಿನ ವಿಚಾರಣೆ ಮೇ 17ರಂದು ನಡೆಯಲಿದೆ.
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!