|

ಬೆಂಗಳೂರು – ಇಲ್ಲಿಯ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ ೧ ರಂದು ನಡೆದಿರುವ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ಸಮೀಕ್ಷಾ ದಳ (ಎನ್.ಐ.ಎ.)ವು ೭ ರಾಜ್ಯಗಳ ೧೭ ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಪ್ರಕರಣದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಕೈವಾಡ ಇರುವ ಮಾಹಿತಿ ಬೆಳಕಿಗೆ ಬಂದಿದೆ.
೧. ಎನ್.ಐ.ಎ. ಬೆಂಗಳೂರಿನ ಆರ್.ಟಿ. ನಗರದಲ್ಲಿನ ಇಸ್ಲಾಮಿಕ್ ಸ್ಟೇಟ್ ಗೆ ಸಂಬಂಧಿತ ಟಿ. ನಝೀರ್ ನ ಮನೆಯ ಮೇಲೆ ದಾಳಿ ನಡೆಸಿದರು. ಬಾಂಬ್ ಸ್ಫೋಟಕ್ಕಾಗಿ ನಝೀರ್ ಇವನೇ ಪ್ರಚೋದನೆ ನೀಡಿದರೆಂದು ಆರೋಪವಿದೆ.
೨. ಎನ್.ಐ.ಎ. ಯು ಈ ಹಿಂದೆ ಗ್ರೆನೇಡ್ (ಕೈ ಬಾಂಬ್) ಪ್ರಕರಣದಲ್ಲಿ ಆರ್.ಟಿ. ನಗರ ಮತ್ತು ಸುಲ್ತಾನಪಾಳ್ಯ ಇಲ್ಲಿ ದಾಳಿ ನಡೆಸಿದ್ದರು. ಅಲ್ಲಿಂದ ಸಜಿವ ಗುಂಡುಗಳು ಮತ್ತು ಗ್ರಾನೈಡ್ ವಶಪಡಿಸಿಕೊಂಡಿದ್ದರು.
೩. ಜುನೈದ್ ಎಂಬ ವ್ಯಕ್ತಿ ಈ ಬಾಂಬ್ ಸ್ಫೋಟದ ಮುಖ್ಯರುವಾರಿ ಎಂದು ತಿಳಿದು ಬಂದಿದೆ. ಹಣದ ಅವ್ಯವಸ್ಥೆಯ ಪ್ರಕರಣದಲ್ಲಿ ಜೈಲಿನಲ್ಲಿ ಇದ್ದಾನೆ. ಎನ್.ಐ.ಎ.ಯು ಜೈಲಿಗೆ ಹೋಗಿ ಅವನ ವಿಚಾರಣೆ ನಡೆಸಿದ್ದಾರೆ.
೪. ಚೆನ್ನೈಯಲ್ಲಿನ ರಾಮನಾಥಪುರಂ ಇಲ್ಲಿಯ ಶಮಶುದ್ದೀನ್ ಎಂಬ ಹೆಸರಿನ ವ್ಯಕ್ತಿಯ ಮನೆಯ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಚೆನ್ನೈಯಲ್ಲಿನ ಸಿದ್ದರಪೇಠ ಮತ್ತು ಬಿದ್ಯಾರ ಇಲ್ಲಿಂದ ೫ ಜನರನ್ನು ವಶಕ್ಕೆ ಪಡೆದಿದ್ದಾರೆ.
There is evidence to suggest that the #IslamicState was behind the #bangaloreblast at the cafe in #Bangalore !#NIA raids 17 places in 7 states
5 people were taken into custody in Chennai ! pic.twitter.com/RLXyzmRvHE
— Sanatan Prabhat (@SanatanPrabhat) March 5, 2024
ದೇಶಾದ್ಯಂತ ‘ಲೋನ್ ವುಲ್ಫ್’ ದಾಳಿಗಳಿಗಾಗಿ ಭಯೋತ್ಪಾದಕರನ್ನು ಸಿದ್ಧಪಡಿಸುತ್ತಿದ್ದ ಫರಾಜ್!
ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ‘ನೀಟ್’ ನ ಪ್ರಶ್ನೆ ಪತ್ರಿಕೆಗಳು ಅಕೋಲಾ ತಲುಪಿದವು!
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion