ಪುರಿ (ಓಡಿಸಾ) ಜಗನ್ನಾಥ ಮಂದಿರದಲ್ಲಿ ನುಗ್ಗಿದ್ದ ಇಬ್ಬರು ಬಾಂಗ್ಲಾದೇಶಿ ನಾಗರಿಕರ ಬಂಧನ !

ಪುರಿ (ಓಡಿಸಾ) – ಜಗನ್ನಾಥ ದೇವಸ್ಥಾನದಲ್ಲಿ ಅಕ್ರಮ ಪ್ರವೇಶ ಮಾಡಿರುವ ಪ್ರಕರಣದಲ್ಲಿ ಒಡಿಸ್ಸಾ ಪೊಲೀಸರು ಇಬ್ಬರು ಬಾಂಗ್ಲಾದೇಶಿ ನಾಗರಿಕರನ್ನು ಬಂಧಿಸಿದ್ದಾರೆ. ಮಾರ್ಚ್ ೩ ರಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಕೆಲವು ಬಾಂಗ್ಲಾದೇಶದ ನಾಗರಿಕರು ಮಂದಿರದಲ್ಲಿ ಹೋಗುವುದನ್ನು ನೋಡಿದರು.

ಅದರ ನಂತರ ಅವರು ಸಿಂಹದ್ವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಂದಿರದ ನಿಯಮಗಳ ಪ್ರಕಾರ ಇಲ್ಲಿ ಕೇವಲ ಹಿಂದುಗಳೇ ಪ್ರವೇಶಿಸಬೇಕು. ಅಹಿಂದುಗಳು ಪ್ರವೇಶ ಮಾಡಿದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಪುರಿಯ ಪೊಲೀಸ ಅಧಿಕಾರಿ ಸುಶೀಲ ಮಿಶ್ರ ಇವರು, ನಮಗೆ ಕೆಲವು ಬಾಂಗ್ಲಾದೇಶದ ಜನರು ಮಂದಿರದಲ್ಲಿ ನುಗ್ಗಿರುವ ದೂರು ದೊರೆತಿದೆ. ನಾವು ಇಬ್ಬರು ಬಾಂಗ್ಲಾದೇಶೀಯರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದೇವೆ. ವಿಚಾರಣೆಯಲ್ಲಿ ಒಬ್ಬರು ಹಿಂದೂ ಇರುವುದಾಗಿ ಬೆಳಕಿಗೆ ಬಂದಿದೆ. ಇಲ್ಲಿ ೯ ಜನರಲ್ಲಿ ೪ ಜನರು ಮಂದಿರದಲ್ಲಿ ನುಗ್ಗಿದ್ದರು.

(ಸೌಜನ್ಯ – Kanak News)

ಸಂಪಾದಕೀಯ ನಿಲುವು

ಬಾಂಗ್ಲಾದೇಶಿ ನಾಗರಿಕರಿಗೆ ದೇಶದಿಂದ ಓಡಿಸದೇ ಇರುವುದರ ಪರಿಣಾಮ ! ಅವರಿಗೆ ಹೊರಗೆ ಹಾಕುವುದರ ಬಗ್ಗೆ ಯಾವುದೇ ಸರಕಾರ ಪ್ರಯತ್ನ ಮಾಡುವುದಿಲ್ಲ, ಇದನ್ನು ತಿಳಿಯಿರಿ !