ಹಿಂದೂಗಳು ಕಟ್ಟುವ ತೆರಿಗೆ ಹಣವನ್ನು ಕೇವಲ ಹಿಂದೂಗಳ ಅಭಿವೃದ್ಧಿಗಾಗಿ ಉಪಯೋಗಿಸಿ ! – ಹರೀಶ ಪೂಂಜ, ಬಿಜೆಪಿ ಸಂಸದ

ಬೆಳ್ತಂಗಡಿ – ಇಲ್ಲಿನ ಭಾಜಪದ ಸಂಸದ ಹರೀಶ ಪೂಂಜ ಅವರು ಫೆಬ್ರವರಿ ೮, ೨೦೨೪ ರಂದು ಒಂದು ‘ಪೋಸ್ಟ“ ಅನ್ನು ಪ್ರಸಾರ ಮಾಡಿದ್ದಾರೆ. ಇದರಲ್ಲಿ ಈ ಆರ್ಥಿಕ ವರ್ಷದಲ್ಲಿ ಹಿಂದೂಗಳು ಪಾವತಿಸುವ ತೆರಿಗೆ ಹಣವನ್ನು ಹಿಂದೂಗಳ ಅಭಿವೃದ್ಧಿಗಾಗಿ ಉಪಯೋಗಿಸಬೇಕು. ಹಿಂದೂಗಳು ಕಟ್ಟುವ ತೆರಿಗೆ ಹಣ ಬೇರೆ ಧರ್ಮದ ಜನರಿಗೆ ಹೋಗುತ್ತದೆ. ಇದು ಹಿಂದೂಗಳ ಮೇಲಿನ ಅನ್ಯಾಯವಾಗಿದೆ. ತೆರಿಗೆ ಹಿಂದೂಗಳದ್ದೆ ಇದೆ, ಹಾಗಾಗಿ ಅದರ ಮೇಲಿನ ಅಧಿಕಾರ ಕೂಡ ಹಿಂದೂಗಳದ್ದೇ ಇರುವುದು ಅವಶ್ಯಕವಾಗಿದೆ ಎಂದು ಹೇಳಿದರು.