ಉಪಮುಖ್ಯಮಂತ್ರಿ ಅಜಿತ್ ಪವಾರ್ ಗುಂಪು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವಾಗಿದೆ !

ಚುನಾವಣಾ ಆಯೋಗದ ಮಹತ್ವದ ನಿರ್ಧಾರ

ಮುಂಬಯಿ – ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಗುಂಪೇ ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಇದರ ಪ್ರಕಾರ ಅಜಿತ್ ಪವಾರ್ ಅವರು ಎನ್‌ಸಿಪಿ ಪಕ್ಷದ ಚುನಾವಣಾ ಚಿಹ್ನೆ ಮತ್ತು ‘ಗಡಿಯಾರ’ವನ್ನು ಪಡೆದುಕೊಂಡಿದ್ದಾರೆ. ಈ ನಿರ್ಧಾರವು ಶರದ್ ಪವಾರ್ ಅವರ ಗುಂಪಿನ ಮುಂದೆ ಅನೇಕ ಸವಾಲುಗಳನ್ನು ಸೃಷ್ಟಿಸಿದೆ ಮತ್ತು ಅವರಿಗೆ ಫೆಬ್ರವರಿ 7 ರವರೆಗೆ ಸಮಯವಿದೆ. ಆ ಅವಧಿಯಲ್ಲಿ ಅವರು ಪಕ್ಷದ ಹೊಸ ಹೆಸರು ಮತ್ತು ಚಿಹ್ನೆಯ ಬಗ್ಗೆ ಕೇಳಬಹುದು. ಆದ್ದರಿಂದ ಮುಂಬರುವ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಚಿಹ್ನೆ ಮತ್ತು ಪಕ್ಷದ ಹೆಸರಿಗೆ 3 ಆಯ್ಕೆಗಳನ್ನು ಸೂಚಿಸುವಂತೆ ಚುನಾವಣಾ ಆಯೋಗವು ಶರದ್ ಪವಾರ್ ಗುಂಪಿಗೆ ಸೂಚನೆ ನೀಡಿದೆ.