ಜಯತು ಜಯತು ಹಿಂದೂರಾಷ್ಟ್ರಮ್ ! – ಪಾಕಿಸ್ತಾನದ ಮಾಜಿ ಹಿಂದೂ ಕ್ರಿಕೇಟ್ ಪಟು ದಾನಿಶ ಕನೆರಿಯಾ

ಪಾಕಿಸ್ತಾನದ ಮಾಜಿ ಹಿಂದೂ ಕ್ರಿಕೇಟ್ ಪಟು ದಾನಿಶ ಕನೆರಿಯಾ ಇವರ ಪೋಸ್ಟ

ಇಸ್ಲಾಮಾಬಾದ (ಪಾಕಿಸ್ತಾನ) – ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಉದ್ಘಾಟನೆ ನಿಮಿತ್ತ ಪಾಕಿಸ್ತಾನದ ಮಾಜಿ ಹಿಂದೂ ಕ್ರಿಕೆಟಿಗ ದಾನಿಶ ಕನೇರಿಯಾ ಅವರು ‘ಎಕ್ಸ್’ ನಿಂದ ವಿವಿಧ ಪೋಸ್ಟ್‌ಗಳನ್ನು ಮಾಡುವ ಮೂಲಕ ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದಾರೆ. ಒಂದು ಪೋಸ್ಟನಲ್ಲಿ ಅವರು, ನೂರಾರು ವರ್ಷಗಳ ಕಾಯುವಿಕೆ ಪೂರ್ಣಗೊಂಡಿದೆ, ಪ್ರತಿಜ್ಞೆ ಪೂರ್ಣಗೊಂಡಿದೆ ಮತ್ತು ಪ್ರಾಣಪ್ರತಿಷ್ಠಾಪನೆ ಪೂರ್ಣಗೊಂಡಿದೆ ಎಂದಿದ್ದಾರೆ. ಇನ್ನೊಂದು ಪೋಸ್ಟ್‌ನಲ್ಲಿ ಅವರು ‘ಜಯತು ಜಯತು ಹಿಂದೂರಾಷ್ಟ್ರಮ್’ ಎಂದು ಹೇಳಿದ್ದಾರೆ.

‘ಕೃಷ್ಣ ಲಲ್ಲಾ ನಾವು ಬರುತ್ತೇವೆ, ಅಲ್ಲಿಯೇ ಬೆಣ್ಣೆ ತಿನ್ನಿಸುತ್ತೇವೆ’ ಎಂದು ಬರೆದಿರುವ ಮತ್ತು ಯೋಗಿ ಆದಿತ್ಯನಾಥ್ ಮತ್ತು ಶ್ರೀ ಕೃಷ್ಣ ಜನ್ಮಭೂಮಿಯ ಛಾಯಾಚಿತ್ರಗಳಿರುವ ಒಂದು ಚಿತ್ರವನ್ನು ಪೋಸ್ಟ್ ಮಾಡುತ್ತಾ ಅವರು ‘ಜಯ ಶ್ರೀ ಕೃಷ್ಣ’ ಎಂದು ಬರೆದಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಅವರು ಶ್ರೀ ರಾಮಲಲ್ಲಾನ ಛಾಯಾಚಿತ್ರವನ್ನು ಫೋಟೋವನ್ನು ಪೋಸ್ಟ್ ಮಾಡಿ, ‘ನನ್ನ ರಾಮ’ ಎಂದು ಬರೆದಿದ್ದಾರೆ.