ಸರಕಾರದಿಂದ ಚಿಕ್ಕಮಗಳೂರಿನ ದತ್ತಪೀಠದಲ್ಲಿ ಜನವರಿ ೨೨ ರಂದು ರಾಮತಾರಕ ಹೋಮಕ್ಕೆ ನಿಷೇಧ !

ಚಿಕ್ಕಮಗಳೂರು – ಅಯೋಧ್ಯೆಯಲ್ಲಿ ಜನವರಿ ೨೨ ಶ್ರೀರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವಾಗ ಚಿಕ್ಕಮಗಳೂರಿನ ಇನಾಮ ದತ್ತಾತ್ರೇಯ ಪೀಠದಲ್ಲಿ ರಾಮತಾರಕ ಹೋಮ ಮಾಡಲು ಸಿದ್ಧತೆ ಮಾಡಿದ್ದರು; ಆದರೆ ಹೋಮ ಮಾಡಲು ಸರಕಾರ ನಿಷೇಧ ಹೇರಿತು. ಇಲ್ಲಿ ಯಜ್ಞ ಶಾಲೆಗೆ ಬೀಗಮುದ್ರೆ ಹಾಕಿದರು. ಇನಾಮ ದತ್ತಾತ್ರೆಯ ದರ್ಗಾದ ಹತ್ತಿರ ಯಜ್ಞಶಾಲೆ ಇದ್ದೂ ಜನವರಿ ೨೨ ರಂದು ವಿಶೇಷ ಪೂಜೆಯ ಸಿದ್ಧತೆ ಮಾಡಿದ್ದರು; ಆದರೆ ಕೊನೆಯ ಕ್ಷಣದಲ್ಲಿ ಜಿಲ್ಲಾ ಆಡಳಿತದಿಂದ ರಾಮ ತಾರಕ ಹೋಮ ನಿಷೇಧಿಸಿದ್ದು ಅದರ ಬಗ್ಗೆ ವ್ಯವಸ್ಥಾಪಕ ಸಮಿತಿವು ಅಸಮಾಧಾನ ವ್ಯಕ್ತಪಡಿಸಿದೆ.