ಜನವರಿ 22 ರಂದು ಕೇಂದ್ರ ಸರ್ಕಾರದ ನೌಕರರಿಗೆ ಅರ್ಧ ದಿನ ರಜೆ! 

ನವ ದೆಹಲಿ –  ಬರುವ ಜನವರಿ 22 ರಂದು ಅಯೋಧ್ಯೆಯ  ಶ್ರೀರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಕೇಂದ್ರ ನೌಕರರಿಗೆ  ಅರ್ಧ ದಿನದ ರಜೆಯನ್ನು ಘೋಷಿಸಲಾಗಿದೆ. ಇದರಿಂದ ದೇವಾಲಯದ ಉದ್ಘಾಟನೆಯ ಸಮಾರಂಭದ ನೇರ ಪ್ರಸಾರವನ್ನು ನೋಡಲು ಸಾಧ್ಯವಾಗುವುದು.

ಕೇಂದ್ರ ಸರ್ಕಾರದಿಂದ ಈ ಸಂದರ್ಭದಲ್ಲಿ ಪ್ರಕಟಿಸಲಾಗಿರುವ ಪತ್ರದಲ್ಲಿ  ಸರಕಾರಿ ನೌಕರರಿಂದ ವ್ಯಕ್ತವಾಗುತ್ತಿರುವ ಭಾವನೆ ಮತ್ತು  ಅವರಿಂದ ಮಾಡಲಾಗಿರುವ ಮನವಿಗಳನ್ನು ಪರಿಗಣಿಸಿ ಸರಕಾರ ಅರ್ಧ ದಿನ ರಜೆ ಘೋಷಿಸಿದೆ ಎಂದು ತಿಳಿಸಲಾಗಿದೆ. ಈ ದಿನ  ಶಾಲಾ-ಕಾಲೇಜುಗಳ ತರಗತಿಗಳೂ ಅರ್ಧ ದಿನ ಮಾತ್ರ ನಡೆಯುತ್ತವೆ.

(ಸೌಜನ್ಯ: India Today)