ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಂದ ಕರೆ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಶ್ರೀರಾಮಮಂದಿರದಲ್ಲಿ ಶ್ರೀ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಎಲ್ಲಾ ಶಂಕರಾಚಾರ್ಯರು ಸಹಭಾಗಿ ಆಗಬೇಕು, ನಾವು ಅವರಿಗೆ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಆಮಂತ್ರಣ ಕಳುಹಿಸುತ್ತೇವೆ. ಯಾವ ಕ್ಷಣ ಹತ್ತಿರ ಬಂದಿದೆ, ಅದು ಶ್ರೇಯಸ್ಸು ಅಥವಾ ಮಾನಪಮಾನದಾಗಿಲ್ಲ. ನಾನು ಇರಬಹುದು, ದೇಶದ ಸಾಮಾನ್ಯ ನಾಗರಿಕ ಇರಬಹುದು ಅಥವಾ ಶಂಕರಚಾರ್ಯರು ಆಗಿರಬಹುದು, ಯಾರು ಕೂಡ ರಾಮನಿಗಿಂತಲೂ ದೊಡ್ಡವರಲ್ಲ. ಪ್ರಭು ರಾಮಚಂದ್ರನಗಿಂತಲೂ ಯಾರು ದೊಡ್ಡವರಲ್ಲ. ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಅಭಿಪ್ರಾಯ ಮಂಡಿಸುವ ಅಧಿಕಾರ ಇದೆ. ಅದರ ಪ್ರಕಾರ ಶಂಕರಾಚಾರ್ಯರು ಅವರ ಅಭಿಪ್ರಾಯ ಮಂಡಿಸಿದ್ದಾರೆ. ಅವರು ಗಾಳಿ ಸುದ್ಧಿಯ ಮೇಲೆ ವಿಶ್ವಾಸ ಇಡಬಾರದು. ಅವರು ಖಂಡಿತವಾಗಿಯು ಈ ಸಮಾರಂಭಕ್ಕೆ ಉಪಸ್ಥಿತರಿರಬೇಕು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಕರೆ ನೀಡಿದರು. ಜ್ಯೋತಿಷ್ಯ, ದ್ವಾರಕ, ಪುರಿ ಮತ್ತು ಶೃಂಗೇರಿಯ ನಾಲ್ಕು ಪೀಠದ ಶಂಕರಾಚಾರ್ಯರು ವಿವಿಧ ಕಾರಣಗಳಿಂದ ಶ್ರೀರಾಮ ಮಂದಿರದ ಉದ್ಘಾಟನೆಗೆ ಉಪಸ್ಥಿತರಿರುವುದಿಲ್ಲ ಎಂದು ತಿಳಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಕರೆ ನೀಡಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!