
ಮಥುರಾ – ಇಲ್ಲಿ ಪುಷ್ಪಾ ಹೆಸರಿನ 85 ವರ್ಷದ ಮಹಿಳೆಯ ಮರಣದ ನಂತರ, ಅವಳ ಅಂತ್ಯಕ್ರಿಯೆಯನ್ನು ಸುಮಾರು 8 ರಿಂದ 9 ಗಂಟೆಗಳ ಕಾಲ ತಡೆ ಹಿಡಿಯಲಾಯಿತು. ಇದರ ಕಾರಣ ಮಹಿಳೆಯ ಮೂವರು ಪುತ್ರಿಯರ ನಡುವೆ ಜಮೀನು ಆಸ್ತಿ ಹಂಚಿಕೆಯ ವಿಚಾರವಾಗಿ ನಡೆದ ಜಗಳವೇ ಆಗಿದೆ. ತಾಯಿ ಸಾಯುವ ಮೊದಲು ಹಿರಿಯ ಪುತ್ರಿ ಶ್ರೀಮತಿ ಮಿಥಿಲೇಶ ತನ್ನ ತಾಯಿಯನ್ನು ತನ್ನ ಪರವಾಗಿ ಮಾಡಿಕೊಂಡು ಅವಳ ಭೂಮಿಯನ್ನು ಮಾರಿ ಎಲ್ಲ ಹಣವನ್ನು ತಾನೇ ತೆಗೆದುಕೊಂಡಳು. ತಾಯಿಯ ಮರಣದ ಬಳಿಕ ಇದು ಗಮನಕ್ಕೆ ಬರುತ್ತಲೇ ಕಿರಿಯ ಪುತ್ರಿ ಸುನೀತಾ ಮತ್ತು ಶಶಿ ಇವರು ಸ್ಮಶಾನ ಭೂಮಿಗೆ ಹೋಗಿ, ಆ ಜಮೀನು ಹಂಚಿಕೆಯ ಕುರಿತು ಹಿರಿಯ ಸಹೋದರಿಯೊಂದಿಗೆ ಜಗಳ ಮಾಡತೊಡಗಿದರು. ಈ ಜಗಳ ಎಷ್ಟು ವಿಕೋಪಕ್ಕೆ ತಲುಪಿದೆಂತರೆ ಇದರ ಮೇಲೆ ಪರಿಹಾರ ಕಂಡು ಹಿಡಿಯದೇ, ಅವರು ತಾಯಿಯ ಅಂತ್ಯಕ್ರಿಯೆಯನ್ನು ಮಾಡಲು ಬಿಡಲಿಲ್ಲ. ಕೊನೆಗೆ ಘಟನಾಸ್ಥಳಕ್ಕೆ ಪೊಲೀಸರು ಆಗಮಿಸಿ ಮಧ್ಯಸ್ಥಿಕೆಯನ್ನು ವಹಿಸಿ, ಮೂವರ ನಡುವೆ ಜಮೀನು ಹಂಚಿಕೆಯ ಬಗ್ಗೆ ಲಿಖಿತ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅಂತ್ಯಕ್ರಿಯೆ ನಡೆಯಿತು.
(ಸೌಜನ್ಯ – Aaj Tak)
ಸಂಪಾದಕೀಯ ನಿಲುವುಸಾಧನೆಯ ಕೊರತೆಯಿಂದಾಗಿ ಸ್ವಾರ್ಥದ ತುತ್ತತುದಿ ತಲುಪಿರುವ ಈ ಘಟನೆ ನಾಚಿಕೆಗೇಡು ! |
ಉಲ್ಲಾಸನಗರದಲ್ಲಿ ಚೈನೀಸ್ ಆಹಾರದಲ್ಲಿ ಮೃತಹಲ್ಲಿ ಪತ್ತೆ!
೬೩ ವರ್ಷದ ಮೌಲ್ವಿಯಿಂದ ೮ ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ
ಕೊಲ್ಹಾಪುರ ಮತ್ತು ಪುಣೆಯಲ್ಲಿ ಎರಡು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ !
Yoga Day : ಯೋಗವು ದೇಹವನ್ನು 40 ನೇ ವಯಸ್ಸಿನಲ್ಲಿ 20 ನೇ ವಯಸ್ಸಿಗಿಂತ ಹೆಚ್ಚು ಮೃದುವಾಗಿಸಲು (ಫ್ಲೆಕ್ಸಿಬಲ್) ಸಹಕಾರಿ! – ಪ್ರಧಾನಮಂತ್ರಿ
ಕೇಂದ್ರ ಸರಕಾರದಿಂದ 16 ರೀತಿಯ ಮಿಶ್ರ ಔಷಧಗಳ ಮೇಲೆ ನಿಷೇಧ !
ಸಂತ ಕಬೀರನಗರ (ಉತ್ತರ ಪ್ರದೇಶ) ಇಲ್ಲಿ ನಾಸಿರನಿಂದ ಆನಂದನ ಶಿರಚ್ಛೇದ