‘ಕೈ ಕತ್ತರಿಸುವೆವು’ ಎಂದು ಬೆದರಿಕೆ ನೀಡುವ ಮುಸಲ್ಮಾನ ಸಂಘಟನೆಯ ಮುಖಂಡನ ವಿರುದ್ಧ ದೂರು ದಾಖಲು !

ಆಡಳಿತರೂಡ ಮೈತ್ರಿ ಕೂಟದಲ್ಲಿನ ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್’ನ ವಿರುದ್ಧ ಬೆದರಿಕೆ !

ತಿರುವನಂತಪುರಂ (ಕೇರಳ) – ಇಲ್ಲಿಯ ಓರ್ವ ಮುಸಲ್ಮಾನ ಯುವ ಸಂಘಟನೆಯ ನಾಯಕ ಅವರ ರಾಜಕೀಯ ಪಕ್ಷದ ವಿಚಾರವಂತರ ವಿರುದ್ಧ ಯಾರಾದರೂ ಮಾತನಾಡಿದರೆ ‘ಕೈ ಕತ್ತರಿಸುವೆ’, ಎಂದು ಬೆದರಿಕೆ ನೀಡಿದ್ದನು. ಇದರಿಂದ ಕೇರಳ ಪೊಲೀಸರು ಅವನ ವಿರುದ್ಧ ದೂರು ದಾಖಲಿಸಿದ್ದಾರೆ. ಸಥಾರ ಪಂಥಾಲೂರ ಎಂದು ಈ ಯುವಕನ ಹೆಸರಾಗಿದ್ದು ಅವನು ‘ಸಮಸ್ತ ಕೇರಳ ಜೇಮ್ ಇಯಾತುಲ್ ಉಲೇಮಾ’ ಈ ರಾಜಕೀಯ ಪಕ್ಷದ ವಿದ್ಯಾರ್ಥಿ ಶಾಖೆಯಾದ ‘ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಶನ್’ನ ನಾಯಕನಾಗಿದ್ದಾನೆ. ಈ ಸಂಘಟನೆಗೆ ಈ ಸುನ್ನಿ ಮುಸಲ್ಮಾನರ ಎಲ್ಲಕ್ಕಿಂತ ಹೆಚ್ಚು ಬೆಂಬಲ ಇದೆ. ‘ಸಮಸ್ತ ಕೇರಳ ಜೆಮ್ ಇಯಾಥುಲ್ ಉಲೇಮಾ’ ಈ ಸಂಘಟನೆಯ ಕೆಲವು ವಿಚಾರವಾದಿಗಳು ಆಡಳಿತಾರೂಡ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಕೆಲವು ನಾಯಕರ ಮೇಲೆ ಅಸಮಾಧಾನವಿದೆ.

ಸಂಪಾದಕೀಯ ನಿಲುವು

ಕೇರಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ತೋರಿಸುವ ಘಟನೆ !