ಬಿಹಾರದಲ್ಲಿನ ರಾಷ್ಟ್ರೀಯ ಜನತಾದಳದ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಾಧಿಕ ಖಾನ್ ನಿಂದ ವೇದಿಕೆಯಲ್ಲಿ ಹನುಮಾನ ಚಾಲಿಸಾದ ಪಠಣ !

ಕೆಲವರು ಧರ್ಮದ ಹೆಸರಿನಲ್ಲಿ ಭ್ರಮೆಗಳನ್ನು ಪಸರಿಸುವ ಪ್ರಯತ್ನ ಮಾಡುತ್ತಾರೆ ಎಂದು ಖಾನ್ ಇವರ ಆರೋಪ

ಬೇತಿಯಾ (ಬಿಹಾರ) – ರಾಷ್ಟ್ರೀಯ ಜನತಾದಳದ ಕಾರ್ಯಕರ್ತ ಸಂವಾದ ಕಾರ್ಯಕ್ರಮದಲ್ಲಿ ಪಕ್ಷದ ಅಲ್ಪಸಂಖ್ಯಾತ ಶಾಖೆಯ ಜಿಲ್ಲಾಧ್ಯಕ್ಷ ಸಾಧಿಕ ಖಾನ ಇವರು ಹನುಮಾನ ಚಾಲಿಸಾದ ಪಠಣ ಮಾಡಿದರು. ಇದರ ಸಂದರ್ಭದಲ್ಲಿ ಖಾನ ಇವರು, ಕೆಲವು ಜನರು ದೇಶದಲ್ಲಿ ಸಹೋದರರ ಮಧ್ಯ ಜಗಳ ಮಾಡಿಸಿ ದ್ವೇಷ ನಿರ್ಮಿಸುತ್ತಿದ್ದಾರೆ. ನಾವು ಬಿಹಾರವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಲು ಇಚ್ಚಿಸುತ್ತೇವೆ; ಆದರೆ ಕೆಲವು ಜನರು ಧರ್ಮದ ಹೆಸರಿನಲ್ಲಿ ಭ್ರಮೆ ಪಸರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

(ಸೌಜನ್ಯ – ಬುಲೆಟ್ ನ್ಯೂಸ್ ಇಂಡಿಯಾ ಡಿಜಿಟಲ್)

ಸಂಪಾದಕೀಯ ನಿಲುವು

ಕೆಲವರು ಎಂದರೆ ಮತಾಂಧ ಮುಸಲ್ಮಾನರೆ ಧರ್ಮದ ಹೆಸರಿನಲ್ಲಿ ಭ್ರಮೆ ಪಸರಿಸುವ ಪ್ರಯತ್ನ ಕಳೆದ ದಶಕಗಳಿಂದ ಮಾಡುತ್ತಿದ್ದಾರೆ. ಇದರ ಬಗ್ಗೆ ಖಾನ್ ಇವರು ಏಕೆ ಮಾತನಾಡುತ್ತಿಲ್ಲ ?

ಒಂದು ಕಡೆ ರಾಷ್ಟ್ರೀಯ ಜನತಾದಳದ ನಾಯಕರು ಪ್ರತಿದಿನ ಹಿಂದೂ ಧರ್ಮವನ್ನು ಟೀಕಿಸುತ್ತಾರೆ, ಹಿಂದೂ ಧರ್ಮದ ಅವಮಾನ ಮಾಡುತ್ತಾರೆ ಹಾಗೂ ಇನ್ನೊಂದು ಕಡೆ ಅವರ ಪಕ್ಷದ ನಾಯಕರು ಹನುಮಾನ ಚಾಲಿಸಾದ ಪಠಣ ಮಾಡುತ್ತಾರೆ. ಇದರಿಂದ ‘ಈ ರಾಷ್ಟ್ರೀಯ ಜನತಾದಳ’ದ ಹಿಂದುಗಳನ್ನು ಖುಷಿಪಡಿಸುವ ಪ್ರಯತ್ನವಾಗಿದೆ, ಇದು ಗಮನಕ್ಕೆ ಬರುತ್ತದೆ. ಇಂತಹ ಪ್ರಯತ್ನ ಮಾಡುವ ಬದಲು ರಾಷ್ಟ್ರೀಯ ಜನತಾದಳ ಅದರ ಹಿಂದುದ್ರೋಹಿ ನಾಯಕರ ಮೇಲೆ ಕ್ರಮ ಕೈಗೊಳ್ಳುವುದು ಹಿಂದುಗಳಿಗೆ ಅಪೇಕ್ಷಿತವಾಗಿದೆ !