‘ಭಾಜಪ ಅಯೋಧ್ಯೆಯಲ್ಲಿ ಬಾಂಬ್ ಸ್ಪೋಟಿಸಿ ಅದನ್ನು ಪಾಕಿಸ್ತಾನ ಮತ್ತು ಮುಸಲ್ಮಾನರ ಮೇಲೆ ಹೊರಿಸಲಿದೆಯಂತೆ ! – ರಾಷ್ಟ್ರೀಯ ಜನತಾದಳದ ಶಾಸಕ ಅಜಯ ಯಾದವ

ಬಿಹಾರದಲ್ಲಿನ ರಾಷ್ಟ್ರೀಯ ಜನತಾದಳದ ಶಾಸಕ ಅಜಯ ಯಾದವ ಇವರ ದಾವೆ !

ಪಾಟಲಿಪುತ್ರ (ಬಿಹಾರ) – ಭಾಜಪ ಜನವರಿ ೨೨ ರಂದು ಅಯೋಧ್ಯೆಯಲ್ಲಿ ದೊಡ್ಡ ಗದ್ದಲ ಸೃಷ್ಟಿಸುತ್ತಿದ್ದಾರೆ. ನಮಗೆ, ಭಾಜಪ ತನ್ನ ಜನರಿಂದಲೇ ಅಲ್ಲಿ ಬಾಂಬ್ ಸ್ಪೋಟ ನಡೆಸಿ ಅದರ ಅಪವಾದನೆಯನ್ನು ಪಾಕಿಸ್ತಾನಿ ಭಯೋತ್ಪಾದಕರ ಮೇಲೆ ಹೊರೆಸುವುದು. ಮುಸಲ್ಮಾನರೇ ಇದನ್ನು ಮಾಡಿದ್ದಾರೆ ಎಂದು ಹೇಳಬಹುದು ಎಂದು ಭವವಾಗುತ್ತಿದೆ, ಎಂದು ಬಿಹಾರದಲ್ಲಿನ ಅತಾರಿ ಮತದಾರ ಸಂಘದ ರಾಷ್ಟ್ರೀಯ ಜನತಾದಳದ ಶಾಸಕ ಅಜಯ ಯಾದವ ಅಲಿಯಾಸ್ ರಂಜಿತ ಯಾದವ ಇವರು ಹೇಳಿಕೆ ನೀಡಿದರು.

ಅಜಯ ಯಾದವ ಮಾತು ಮುಂದುವರೆಸಿ, ನಾವು ತೆರಿಗೆಯಲ್ಲಿ ಯಾವ ಹಣ ನೀಡಿದ್ದೇವೆ ಅದನ್ನು ಶ್ರೀರಾಮ ಮಂದಿರಕ್ಕಾಗಿ ಖರ್ಚು ಮಾಡಿ ಭಾಜಪ ತನ್ನ ಬೆನ್ನು ತಟ್ಟಿಕೊಳ್ಳುತ್ತಿದೆ. (ಶ್ರೀರಾಮಮಂದಿರಕ್ಕಾಗಿ ಸರಕಾರದ ಅಲ್ಲ, ಹಿಂದುಗಳು ಅರ್ಪಣೆ ನೀಡಿರುವ ಹಣ ಖರ್ಚು ಮಾಡಲಾಗಿದೆ, ಇದನ್ನು ಯಾದವ ಇವರು ನೆನಪಿನಲ್ಲಿ ಇಟ್ಟುಕೊಳ್ಳಬೇಕು ! – ಸಂಪಾದಕರು) ಭಾಜಪ, ನಾವು ರಾಮ ಮಂದಿರ ಕಟ್ಟಿಸಿದ್ದೇವೆ. ಎಂದು ಹೇಳುತ್ತದೆ. ಭಾಜಪ ತನ್ನ ಮನೆಯಿಂದ ಹಣ ತಂದಿದೆಯೇ ? ಎಂದು ಯಾದವ ಇವರು ಪ್ರಶ್ನೆ ಕೂಡ ಕೇಳಿದರು.

ಸಂಪಾದಕೀಯ ನಿಲುವು

ನಾಲಿಗೆಗೆ ಎಲುಬಿಲ್ಲ ಎಂದು ಹೇಗ ಬೇಕಾದರು ಹೋರಳಿಸುವ ಶಾಸಕ ಅಜಯ ಯಾದವ ! ಬಿಹಾರದಲ್ಲಿ ಯಾದವ ಪಕ್ಷದ ಸರಕಾರ ಇರುವುದರಿಂದ ಅವರ ಮೇಲೆ ಕ್ರಮ ಕೈಗೊಳ್ಳುವುದು ಅಸಾಧ್ಯ !

ಭಾರತದಲ್ಲಿ ಹಿಂದೂಗಳ ಮಂದಿರದ ಮೇಲೆ ಇಲ್ಲಿಯವರೆಗೆ ಜಿಹಾದಿ ಭಯೋತ್ಪಾದಕರು ಮತ್ತು ಮತಾಂಧ ಮುಸಲ್ಮಾನರು ದಾಳಿ ಮಾಡಿದ್ದಾರೆ, ಇದರ ಬಗ್ಗೆ ಅಜಯ ಯಾದವ ಇವರು ಎಂದಾದರೂ ಮಾತನಾಡಿದ್ದಾರೆಯೇ ?