Vegetarian Shri Ram : ಶ್ರೀರಾಮನು ವನವಾಸದಲ್ಲಿ ಮಾಂಸಾಹಾರವನ್ನು ಸೇವಿಸಿರುವ ಬಗ್ಗೆ ಯಾವುದೇ ಗ್ರಂಥದಲ್ಲಿ ಬರೆದಿಲ್ಲ ! – ಶ್ರೀರಾಮ ಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ

ಶ್ರೀರಾಮ ಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ ಇವರ ಸ್ಪಷ್ಟ ಹೇಳಿಕೆ !

ಅಯೋಧ್ಯೆ (ಉತ್ತರ ಪ್ರದೇಶ) – ಜಿತೇಂದ್ರ ಅವ್ಹಾಡ ಇವರ ಹೇಳಿಕೆಯ ಬಗ್ಗೆ ಶ್ರೀ ರಾಮ ಜನ್ಮಭೂಮಿಯ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ ಇವರು, ರಾಷ್ಟ್ರವಾದಿ ಕಾಂಗ್ರೆಸ್ ನಾಯಕರು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಹೇಳಿದ್ದಾರೆ. ಶ್ರೀರಾಮನು ವನವಾಸದಲ್ಲಿರುವಾಗ ಮಾಂಸಾಹಾರವನ್ನು ಸೇವಿಸಿದ್ದನು ಎಂದು ಯಾವುದೇ ಗ್ರಂಥದಲ್ಲಿ ಬರೆದಿಲ್ಲ. ಅವನು ವನವಾಸದಲ್ಲಿ ಗಡ್ಡಗೆಣಸುಗಳನ್ನು ತಿನ್ನುತ್ತಿದ್ದನು ಎಂದು ಶಾಸ್ತ್ರಗಳಲ್ಲಿ ಬರೆದಿದೆ.

ಆವ್ಹಾಡ ಇವರ ವಿರುದ್ಧ ಯಾವುದೇ ಕ್ರಮ ಕೈಕೊಳ್ಳದಿದ್ದರೆ ನಾನು ಆವ್ಹಾಡರನ್ನು ಕೊಲ್ಲುವೆ ! – ಪರಮಹಂಸ ಆಚಾರ್ಯ

ಅಯೋಧ್ಯೆಯ ಪರಮಹಂಸ ಆಚಾರ್ಯರು ಮಾತನಾಡುತ್ತಾ, ಜಿತೇಂದ್ರ ಆವ್ಹಾಡ ನೀಡಿರುವ ಹೇಳಿಕೆ ಅಪಮಾನಕಾರಿಯಾಗಿದೆ. ಇದರಿಂದಾಗಿ ರಾಮಭಕ್ತರ ಭಾವನೆಗಳು ನೋಯಿಸಲ್ಪಟ್ಟಿದೆ. ಆವ್ಹಾಡ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರವನ್ನು ಒತ್ತಾಯಿಸುತ್ತೇನೆ. ಒಂದು ವೇಳೆ ಕಠಿಣ ಕ್ರಮ ಕೈಕೊಳ್ಳದಿದ್ದರೆ, ಆವ್ದಾಡ್ ರನ್ನು ಸ್ವತಃ ನಾನು ಕೊಲ್ಲುತ್ತೇನೆ ಎಂದು ಹೇಳಿದ್ದಾರೆ.