Abusing Yogi Adityanath : ಗಾಜಿಯಾಬಾದ್ (ಉತ್ತರಪ್ರದೇಶ)ನ ಪೋಲೀಸರಿಂದ ಮಹಮ್ಮದ್ ವಸೀಂನ ಬಂಧನ !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಅವಾಚ್ಯಪದ ಬಳಸಿದ ಪ್ರಕರಣ !

ಗಾಜಿಯಾಬಾದ (ಉತ್ತರಪ್ರದೇಶ) – ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರ ವಿರುದ್ಧ ಅವಾಚ್ಯ ಪದಗಳನ್ನು ಬಳಸಿದ ಆರೋಪದ ಕುರಿತು ಪೊಲೀಸರು ಮಹಮ್ಮದ ವಸೀಂನನ್ನು ಪೋಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಮಸೂರಿ ಪೋಲೀಸ ಠಾಣೆಯ ಇನ್ಸಪೆಕ್ಟರ್ ರಾಜೀವ ಕುಮಾರ ಇವರು ವಸೀಂ ವಿರುದ್ಧ ಪ್ರಕರಣ ದಾಖಲಿಸಿದ್ದರು.

೧. ವಸೀಂ ಮೆರಠ ನಿವಾಸಿಯಾಗಿದ್ದಾನೆ; ಆದರೆ ಮಸೂರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಪ್ಲಾಸ್ಟಿಕ್ ಖುರ್ಚಿಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದನು.

೨. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ವಸೀಂ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು.

೩. ವೀಡಿಯೋದಲ್ಲಿ ಮುಖ್ಯಮಂತ್ರಿ ಯೋಗಿ ಅವರ ಬಗ್ಗೆ ವಸೀಂ, ‘ನಾವು ಮುಸಲ್ಮಾನರಾಗಿದ್ದೇವೆ, ನಮ್ಮನ್ನು ಅವರು ಕೊಲ್ಲುತ್ತಾರೆಯೇ ? ಅವರ ತೊಂಬತ್ತು ತಲೆಮಾರುಗಳೂ ನಮ್ಮನ್ನು ನಾಶ ಮಾಡಲಾರರು. ಅವರು ಆಕಾಶದಿಂದ ಬಂದಿದ್ದಾರೆಯೇ ?‘ ಎಂದು ಹೇಳಿದ್ದ.

೪. ‘ಯೋಗಿ ಸರಕಾರದ ಅವಧಿಯಲ್ಲಿ ಗೂಂಡಾಗಿರಿ ಮುಗಿಯಲಿಲ್ಲವೇ ?‘ ಎಂದು ಸಂದರ್ಶಕರು ಪ್ರಶ್ನೆ ಕೇಳಿದಾಗ, ವಸೀಂ ಸಿಟ್ಟಿನಿಂದ ‘ಯೋಗಿ ಸ್ವತಃ ಗೂಂಡಾ ಇದ್ದಾರೆ‘ ಎಂದು ಹೇಳಿದ್ದಾನೆ.

ಸಂಪಾದಕೀಯ ನಿಲುವು

ಹಿಂದುತ್ವನಿಷ್ಠಗಳ ಬಗ್ಗೆ ಮತಾಂಧರ ಮನದಲ್ಲಿ ಎಷ್ಟು ದ್ವೇಷ ಇದೆ, ಎಂದು ಇದರಿಂದ ಕಂಡು ಬರುತ್ತಿದೆ !