ಗೋಪಾಲಗಂಜ (ಬಿಹಾರ) ಇಲ್ಲಿಯ ಫ್ಲೈಓವರ್ ಮೇಲಿನ ಹಳ್ಳದಿಂದಾಗಿ ಅಪಘಾತ ಆಗಿದ್ದರಿಂದ ನ್ಯಾಯಾಧೀಶ ಮತ್ತು ಅವರ ತಾಯಿಯ ಗಂಭೀರವಾಗಿ ಗಾಯಗೊಂಡಿದ್ದಾರೆ

ಗೋಪಾಲಗಂಜ (ಬಿಹಾರ) – ಇಲ್ಲಿಯ ರಾಷ್ಟ್ರೀಯ ಹೆದ್ದಾರಿ ೨೭ ರಲ್ಲಿ ಕರಮೈನಿ ಗಾಜಿ ಗ್ರಾಮದ ಹತ್ತಿರ ನಡೆದ ಅಪಘಾತದಲ್ಲಿ ಮೋತಿಹಾರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ಶಿವಂ ಸಿಂಹ ಮತ್ತು ಅವರ ತಾಯಿ ಮಂಜು ದೇವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಈ ಅಪಘಾತವು ಹೆದ್ದಾರಿಯ ಮೇಲು ಸೇತುವೆಯಲ್ಲಿರುವ ಹಳ್ಳದಲ್ಲಿ ವಾಹನ ಹೋಗಿರುವುದರಿಂದ ನಡೆದಿದೆ. ವಾಹನ ಹಳ್ಳದಲ್ಲಿ ಹೋಗಿರುವುದರಿಂದ ಶಿವಂ ಸಿಂಹ ಇವರ ವಾಹನದ ಮೇಲಿನ ನಿಯಂತ್ರಣ ತಪ್ಪಿತು ಮತ್ತು ವಾಹನ ರಸ್ತೆಯ ವಿಭಾಜಕಕ್ಕೆ ಅಪ್ಪಳಿಸಿತು.

ಸಂಪಾದಕೀಯ ನಿಲುವು

ರಸ್ತೆಯಲ್ಲಿನ ಹಳ್ಳದ ಸಮಸ್ಯೆ ಮಾರಣಾಂತಿಕವಾಗಿದೆ. ಇದು ಸರಕಾರಕ್ಕೆ ಯಾವಾಗ ತಿಳಿಯುವುದು ? ಇದಕ್ಕೆ ಜವಾಬ್ದಾರ ಆಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಅಗ್ರಹಿಸಿದರೆ, ಅದರಲ್ಲಿ ತಪ್ಪೇನು ಇಲ್ಲ ?