ಕೇಕ್ ಕತ್ತರಿಸಿ ಮದ್ಯ ಸುರಿದು ‘ಜೈ ಮಾತಾ ದಿ’ ಎಂದ ನಟ ರಣಭೀರ್ ಕಪೂರ್ ವಿರುದ್ಧ ಕೇಸ್ !


ಮುಂಬಯಿ – ಹಿರಿಯ ನಟ ಶಶಿ ಕಪೂರ್ ಅವರ ಪುತ್ರ ಕುಣಾಲ್ ಕಪೂರ್ ಕ್ರಿಸ್ಮಸ್ ಸಂದರ್ಭದಲ್ಲಿ ಕೈಯಲ್ಲಿ ಚಾಕುವಿನಿಂದ ಕೇಕ್ ಕತ್ತರಿಸುತ್ತಿದ್ದ. ಅದೇ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದ ನಟ ರಣಭೀರ್ ಕಪೂರ್ ಕೇಕ್ ಮೇಲೆ ಮದ್ಯ ಸುರಿದು ಬೆಂಕಿ ಹಚ್ಚಿ ‘ಜೈ ಮಾತಾ ದಿ’ ಎಂದು ಕೂಗಿದ. ಈ ರೀತಿಯಲ್ಲಿ ಹಿಂದುಗಳ ಧಾರ್ಮಿಕ ಭಾವನೆಯನ್ನು ನೋಯಿಸಿದ ಕಾರಣ ರಣಭೀರ್ ಕಪೂರ್ ಮತ್ತು ಕಪೂರ್ ಕುಟುಂಬದ ವಿರುದ್ಧ ಸಂಜಯ್ ತಿವಾರಿ ಇವರು ದೂರು ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಪಾದಕೀಯ ನಿಲುವು

ಯಾವ ಕ್ಷಣದಲ್ಲಿ ಏನು ಹೇಳಬೇಕು ಎಂಬ ಅರಿವೂ ಇಲ್ಲದ ನಟರು ! ದೇವರನ್ನು ಅವಮಾನಿಸುವವರನ್ನು ವಿರೋಧಿಸಲು ಹಿಂದೂಗಳು ಸಂಘಟಿತರಾಗುತ್ತಾರೆಯೇ ?

ನಟರು ಎಂದಾದರೂ ಇತರ ಧರ್ಮಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಧೈರ್ಯ ಮಾಡುತ್ತಾರೆಯೇ ?