ಕೋಟಿ ಕೋಟಿ ನಮನಗಳು ಮಾರ್ಗಶಿರ ಕೃ. ೧೦, ೬.೧.೨೦೨೪

ಶ್ರೀ ಬ್ರಹ್ಮ ಚೈತನ್ಯ ಮಹಾರಾಜರ ಪ್ರವಚನ : ಭಗವಂತನ ಸ್ಮರಣೆಯೆ ಸದ್ಭುದ್ಧಿಯಾಗಿರುತ್ತದೆ
ಪರಮೇಶ್ವರನು ಎಲ್ಲ ಕಡೆಗೆ ತುಂಬಿಕೊಂಡಿರುತ್ತಾನೆ . ವಿಶ್ವವನೆಲ್ಲ ವ್ಯಾಪಿಸಿರುತ್ತಾನೆ . ಅಂದ ಮೇಲೆ ಅವನ ಅಸ್ತಿತ್ವದ ಅರಿವು ಪ್ರತಿಯೊಬ್ಬರಿಗೂ ಏಕೆ ಆಗುವದಿಲ್ಲ ? ಯಾರ ಭಾವನೆಯು ಪ್ರಗಲ್ಪವಾಗಿರುತ್ತದೆಯೋ ಅವರಿಗೆ ಪರಮೇಶ್ವರನ ಅಸ್ತಿತ್ವದ ಅನುಭವ ಬರುತ್ತದೆ , ಬೇರೆಯವರಿಗೆ ಬರುವದಿಲ್ಲ ಆದ್ದರಿಂದ ಇಂಥ ಭಾವನೆ ಇರುವದು ಅವಶ್ಯವಿರುತ್ತದೆ ಹಾಗೂ ಅದು ನಿರ್ಮಾಣವಾಗುವದಕ್ಕಾಗಿ ಭಗವಂತನ ಸ್ಮರಣೆಯು ಅತ್ಯಂತ ಅವಶ್ಯ ವಾಗಿರುತ್ತದೆ . ನಾನು ನಾಮಸ್ಮರಣೆ ಮಾಡುತ್ತೇನೆ ಎಂದು ಯಾರು ಹೇಳುತ್ತಾರೋ ಅವರು ನನಗೆ ಉಪಕಾರ ಮಾಡುತ್ತಾರೆ ಎಂದು ನನಗೆ ಅನಿಸುತ್ತದೆ . ಏಕೆಂದರೆ , ಯಾವ ಮನುಷ್ಯನು ನಾಮಸ್ಮರಣೆ ಮಾಡುತ್ತಾನೊ ಅವನು ತನ್ನ ಉದ್ಧಾರ ಮಾಡಿಕೊಳ್ಳುತ್ತಾನೆ . ಅಂದರೆ ಪರ್ಯಾಯವಾಗಿ ನನ್ನ ಮೇಲೆ ಉಪಕಾರವನ್ನೇ ಮಾಡುತ್ತಿರುತ್ತಾನೆ .
ಬುದ್ದಿವಾದಿಗಳಿಗೆ ಒಂದು ಸಂಶಯ ಬರುವದೇನೆಂದರೆ, ಪರಮೇಶ್ವರನು ಬುದ್ಧಿಧಾತಾ ಬುದ್ದಿ ಕೊಡುವವನು ಇರುತ್ತಾನೆ ಅಂದಮೇಲೆ ಮನುಷ್ಯನಲ್ಲಿ ದುರ್ಬುದ್ದಯು ಬಂದಿತೆಂದರೆ ಆ ದೋಷವು ಮನುಷ್ಯನದೆಂದು ಹೇಗೆ ಹೇಳುವದು ? ಇದಕ್ಕೆ ಉತ್ತರವೆಂದರೆ , ಬುದ್ಧಿದಾತಾ ಪರಮೇಶ್ವರನೇನೋ ನಿಜ , ಆದರೆ ಆ ಬುದ್ದಿಯು. ಸದ್ಭುದ್ಧಿ ಅಥವಾ ದುರ್ಬುದ್ದಿ ಏಕೆ ಆಗುತ್ತದೆ ಎಂಬುದನ್ನು ನೋಡುವದು ಅವಶ್ಯವಿರುತ್ತದೆ . ಪ್ರಕಾಶ ಹಾಗೂ ಅಂಧಕಾರ ಇವೆರಡಕ್ಕೂ ಸೂರ್ಯನೇ ಕಾರಣನಾಗಿರುತ್ತಾನೆ . ಸೂರ್ಯನ ಇರುವಿಕೆಯು ಪ್ರಕಾಶಕ್ಕೆ ಕಾರಣವಾದರೆ ಅವನ ಇಲ್ಲದಿರುವಿಕೆಯು ಅಂಧಕಾರಕ್ಕೆ ಕಾರಣವಾಗಿರುತ್ತದೆ . ಅದರಂತೆ ಭಗವಂತನ ಸ್ಮರಣೆಯು ಸದ್ಭುದ್ಧಿಗೆ ಕಾರಣವಾದರೆ ವಿಸ್ಮರಣೆಯು ದುರ್ಬುದ್ಧಿಗೆ ಕಾರಣವಾಗುತ್ತದೆ . ಆದ್ದರಿಂದ ಬುದ್ಧಿದಾತಾ ಪರಮೇಶ್ವರನೆಂಬುದು ನಿಜವಾಗಿದ್ದರೂ ಸದ್ದುಧ್ಧಿ ಅಥವಾ ದುರ್ಬುದ್ಧಿ ನಿರ್ಮಾಣ ಮಾಡಿಕೊಳ್ಳುವದು ಮನುಷ್ಯನ ಕೈಯಲ್ಲಿಯೇ ಇರುತ್ತದೆ . ಭಗವಂತನ ಸ್ಮರಣೆ ಮಾಡುವದರಿಂದ ದುರ್ಬುದ್ಧಿಯು ಆಗುವದಿಲ್ಲ . ಆದ್ದರಿಂದ ಯಾವಾಗಲೂ ಭಗವಂತನ ಸ್ಮರಣೆಯಲ್ಲಿ ಇರಬೇಕು ಹಾಗೂ ಇದಕ್ಕೆ ಉಪಾಯವೆಂದರೆ ನಾಮಸ್ಮರಣೆ , ಸರ್ವಸಂಗ ಪರಿತ್ಯಾಗ ಮಾಡಿ ಭಗವಂತನ ಸ್ಮರಣೆ ಮಾಡಬೇಕು . ಆದರೆ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿ , ಅದರಲ್ಲಿ ಭಗವಂತನ ಅನುಸಂಧಾನವನ್ನಿಟ್ಟುಕೊಳ್ಳುವದು ಅದಕ್ಕಿಂತಲೂ ಶ್ರೇಷ್ಟವಾಗಿರುತ್ತದೆ . ಭಗವಂತನ ಕೃಪೆಯಿಂದ ಪ್ರಾಪ್ತವಾದ ಇಂದಿನ ದಿನವನ್ನು ನಾವು ಅವನಿಗೆ ಸಮರ್ಪಿಸಬೇಕು . ಭಗವಂತನ ಅನುಸಂಧಾನವನ್ನಿಡುವದರಿಂದ ದಿವಸವು ಅವನಿಗೆ ಸಮರ್ಪಣವಾಗುತ್ತದೆ . ಈ ರೀತಿ ಇಂದಿನ ದಿವಸವನ್ನು ಭಗವಂತನ ಅನುಸಂಧಾನದಲ್ಲಿ ಕಳೆದರೆ ನಮಗೆ ನಿತ್ಯ ದೀಪಾವಳಿಯೇ ಇದ್ದಂತೆ , ಅನುಸಂಧಾನದಲ್ಲಿ ಸ್ತ್ರೀ – ಪುರುಷ , ಶ್ರೀಮಂತ – ಬಡವ ಎಂಬ ಭೇದವಿರುವದಿಲ್ಲ . ಅನ್ಯ ಅನೇಕ ಸಾಧನಗಳಿಂದ ಏನು ಸಾಧಿಸುತ್ತದೆಯೋ ಅದು ಕೇವಲ ಅನುಸಂಧಾನದಿಂದ ಸಾಧಿಸುತ್ತದೆ ; ಇದೇ ಈ ಯುಗದ ಮಹಿಮೆಯಾಗಿರುತ್ತದೆ . ಅನ್ಯ ವಿಷಯಗಳು ಮನಸ್ಸಿನಲ್ಲಿ ಬರದೇ ಕೇವಲ ಒಂದೇ ವಿಷಯ ಮನಸ್ಸಿನಲ್ಲಿ ಬರುವದಕ್ಕೆ ಅನುಸಂಧಾನವೆನ್ನುತ್ತಾರೆ . ಭಗವಂತನ ಅನುಸಂಧಾನವೇ ನಿಜವಾದ ಪುಣ್ಯವಾಗಿರುತ್ತದೆ ಹಾಗೂ ಜೀವನದಲ್ಲಿ ಸಂಪಾದಿಸಬೇಕಾದ ಏಕಮೇವವಸ್ತು ಆಗಿರುತ್ತದೆ ಭಗವಂತನ ಅನುಸಂಧಾನ ಇಟ್ಟುಕೊಳ್ಳಿರಿ ಅಂದರೆ ಉಳಿದೆಲ್ಲ ಗುಣಗಳು ತಾವಾಗಿಯೆ ಬೆನ್ನುಹತ್ತಿ ಬರುತ್ತದೆ. ಭಗವಂತನಿಗೆ ಅನನ್ಯ ಭಾವದಿಂದ – ‘ ಹೇ ದೇವಾ , ಪ್ರಾರಬ್ದಾನುಸಾರ ಬರುವ ಭೋಗಗಳು ಬರಲಿ , ಆದರೆ ನಿನ್ನ ಅನುಸಂಧಾನ ಮಾತ್ರ ತಪ್ಪದಿರಲಿ ‘ ಎಂದು ಪ್ರಾರ್ಥಿಸಬೇಕು.
ಮುಖ್ಯ ವಿಚಾರನಾಮ ಹಾಗೂ ಅನುಸಂಧಾನ ಇಪ್ಪತ್ನಾಲ್ಕು ಗಂಟೆಗಳೂ ನಡೆಯುತ್ತಿರಬೇಕು . ಅಂಥ ಸಮಯದಲ್ಲಿ ಬೇರೆ ಯಾವದಾದರೊಂದು ಕಾರ್ಯವು ಸಮಯಕ್ಕನುಸಾರ ಆಗದಿದ್ದರೆ ಅದರ ವಿಷಯದಲ್ಲಿ ಆಗ್ರಹವಿರಬಾರದು. |
ಜೈ ಜೈ ರಘುವೀರ ಸಮರ್ಥ
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’
ಸದ್ಧರ್ಮಾಚರಣೆಯು ಇಹಲೋಕದ ಐಶ್ವರ್ಯ ಮತ್ತು ವೈಭವದ ಸಾಧನ !
ಕೋಟಿ ಕೋಟಿ ನಮನಗಳು
ಕೋಟಿ ಕೋಟಿ ನಮನಗಳು
ತಮಿಳುನಾಡಿನ ಶ್ರೀ ರಾಮೇಶ್ವರಮ್ (ರಾಮನಾಥಸ್ವಾಮಿ) ದೇವಾಲಯದ ಬಗ್ಗೆ ಸನಾತನದ ಓರ್ವ ಸ್ತ್ರೀ ಸಂತರಿಗೆ ಅರಿವಾದ ಸೂಕ್ಷ್ಮ ಸ್ತರದ ವೈಶಿಷ್ಟ್ಯಗಳು
ಗುರುಗಳು ನೀಡಿದ ರಾಮನಾಮದ ಗುರುಮಂತ್ರದಿಂದ ಡಾ. ಆಠವಲೆಯವರ ಮನಸ್ಸಿನಲ್ಲಿ ರಾಮರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆ ಮಾಡುವ ವಿಚಾರ ಬರುವುದು