ಅತೃಪ್ತ ಪೂರ್ವಜರಿಂದಾಗುವ ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗಾಗಿ ದತ್ತನ ಜಪವನ್ನು ಎಷ್ಟು ಮಾಡಬೇಕು ?

ಅ. ಯಾವುದೇ ರೀತಿಯ ತೊಂದರೆ ಆಗದಿದ್ದರೆ ಮುಂದೆ ತೊಂದರೆ ಆಗಬಾರದೆಂದು, ಸ್ವಲ್ಪ ತೊಂದರೆ ಇದ್ದರೆ ಪ್ರತಿದಿನ ೧ ರಿಂದ ೨ ಗಂಟೆ ‘ಶ್ರೀ ಗುರುದೇವ ದತ್ತ ‘ ಈ ನಾಮಜಪವನ್ನು ಮಾಡಬೇಕು.

ಆ. ಮಧ್ಯಮ ತೊಂದರೆ ಇದ್ದರೆ ಕುಲದೇವರ ನಾಮಜಪದ ಜೊತೆಗೆ ‘ಶ್ರೀ ಗುರುದೇವ ದತ್ತ’ ಈ ನಾಮಜಪವನ್ನು ಪ್ರತಿದಿನ ೨ ರಿಂದ ೪ ಗಂಟೆ ಮಾಡಬೇಕು. ಅದರೊಂದಿಗೆ ಗುರುವಾರ ದತ್ತನ ದೇವಸ್ಥಾನಕ್ಕೆ ಹೋಗಿ ಏಳು ಪ್ರದಕ್ಷಿಣೆ ಹಾಕಬೇಕು ಹಾಗೂ ಅಲ್ಲಿ ಕುಳಿತು ಒಂದೆರಡು ಮಾಲೆ ಜಪ ಮಾಡಬೇಕು. ಇದನ್ನು ಒಂದು ವರ್ಷದವರೆಗಾದರೂ ಮಾಡಬೇಕು. ಅನಂತರ ಮೂರು ಮಾಲೆ ಜಪವನ್ನು ನಿಯಮಿತವಾಗಿ ಮಾಡಬೇಕು.

ಇ. ತೀವ್ರ ತೊಂದರೆಯಿದ್ದರೆ ಕುಲದೇವತೆಯ ನಾಮಜಪದ ಜೊತೆಗೆ ‘ಶ್ರೀಗುರುದೇವ ದತ್ತ’ ಈ ನಾಮಜಪವನ್ನು ಪ್ರತಿದಿನ ೪ ರಿಂದ ೬ ಗಂಟೆ ಮಾಡಬೇಕು. ಯಾವುದಾದರೊಂದು ಜ್ಯೋತಿರ್ಲಿಂಗದ ಸ್ಥಳಕ್ಕೆ ಹೋಗಿ ನಾರಾಯಣ ನಾಗಬಲಿ, ನಾಗಬಲಿ, ತ್ರಿಪಿಂಡಿ ಶ್ರಾದ್ಧ, ಕಾಳಸರ್ಪ ಶಾಂತಿ ಇತ್ಯಾದಿ ವಿಧಿ ಮಾಡಬೇಕು. ಅದರ ಜೊತೆಗೆ ಯಾವುದಾದರೊಂದು ದತ್ತ ಕ್ಷೇತ್ರದಲ್ಲಿದ್ದು ಸಾಧನೆ ಮಾಡಬೇಕು ಅಥವಾ ಸಂತರ ಸೇವೆ ಮಾಡಿ ಅವರ ಆಶೀರ್ವಾದವನ್ನು ಪಡೆಯಬೇಕು.

ಈ. ಪಿತೃಪಕ್ಷದಲ್ಲಿ ದತ್ತನ ನಾಮಜಪ ಮಾಡುವುದರಿಂದ ಪಿತೃಗಳ ಮುಂದಿನ ಪ್ರವಾಸಕ್ಕೆ ಗತಿ ಪ್ರಾಪ್ತಿಯಾಗುತ್ತದೆ; ಆದ್ದರಿಂದ ಈ ಅವಧಿಯಲ್ಲಿ ಪ್ರತಿದಿನ ೬ ಗಂಟೆ (೭೨ ಮಾಲೆ) ದತ್ತನ ನಾಮಜಪ ಮಾಡಬೇಕು. ನಾಮಜಪದ ಹೊರತು ಉಳಿದ ಸಮಯದಲ್ಲಿ ಪ್ರಾರಬ್ಧದಿಂದ ತೊಂದರೆಯಾಗಬಾರದೆಂದು ಹಾಗೂ ಆಧ್ಯಾತ್ಮಿಕ ಉನ್ನತಿಯಾಗಲು ಸಾಮಾನ್ಯ ಜನರು ಹಾಗೂ ಪ್ರಾಥಮಿಕ ಹಂತದ ಸಾಧಕರು ತಮ್ಮ ಕುಲದೇವತೆಯ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು.