ಜೈಪುರ – ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆದ ನಂತರ ಜೈಪುರದ ಹವಾಮಹಲ್ ಕ್ಷೇತ್ರದಿಂದ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಅವರು ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು, ‘ಒಬ್ಬನೇ ಒಬ್ಬ ರೋಹಿಂಗ್ಯಾ ಅಥವಾ ಬಾಂಗ್ಲಾದೇಶಿ ನುಸುಳುಕೋರರನ್ನು ರಾಜಸ್ಥಾನದಲ್ಲಿ ಇರಲು ಬಿಡುವುದಿಲ್ಲ’ ಎಂದು ಹೇಳಿದ್ದಾರೆ. ಆಚಾರ್ಯ ಬಾಲಮುಕುಂದ್ ಇವರು ಕಾಂಗ್ರಸ್ ನ ಆರ್.ಆರ್. ತಿವಾರಿ ಅವರನ್ನು ಸೋಲಿಸಿ ಗೆದ್ದಿದ್ದಾರೆ.
न्यू राजस्थान में आपका स्वागत है।
हवामहल विधानसभा सीट से चुने गए बालमुकुंद आचार्य।रोहिग्या- बांग्लादेशी तत्काल राजस्थान छोड दे
जय श्रीराम #ElectionResult#BalMukundAcharyapic.twitter.com/I8zuak3ivF
— Adv. Vikas Deo कानून मित्र! जय हिन्द 🇮🇳 ✪ (@vikascreateyug) December 4, 2023
ಅಕ್ರಮ ಮಾಂಸದ ಅಂಗಡಿಗಳನ್ನು ಮುಚ್ಚಲು ಬಲಮುಕುಂದ ಆಚಾರ್ಯ ಇವರ ಆದೇಶ !
ಜೈಪುರದ ಹವಾಮಹಲ್ ಚುನಾವಣಾ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕ ಬಾಲಮುಕುಂದ ಆಚಾರ್ಯ ಅವರು ಅಕ್ರಮ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಶಾಸಕರ ಬೇಡಿಕೆಯನ್ನು ಈಡೇರಿಸಲು ಪೊಲೀಸರು 2 ದಿನಗಳ ಕಾಲಾವಕಾಶ ಕೋರಿದ್ದಾರೆ. ಆಚಾರ್ಯ ಬಾಲಮುಕುಂದ ಅವರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದ್ದು, ಅದರಲ್ಲಿ ಅವರು, ‘ನನ್ನ ಪ್ರದೇಶದಲ್ಲಿ ಅಕ್ರಮ ಮಾಂಸದ ಅಂಗಡಿಗಳನ್ನು ತೆರೆಯಲು ನಾನು ಅನುಮತಿಸುವುದಿಲ್ಲ’ ಎಂದು ಅವರು ಘೋಷಿಸಿದ್ದಾರೆ.
राजस्थान: विधायक बनते ही एक्शन में आए बीजेपी नेता बालमुकुन्द आचार्य#Rajasthan #BalmukundAcharya #ElectionResult #balmukundacharya #RajasthanElection2023 #WATCH #VIDEO pic.twitter.com/hd9znBdJyQ
— TheSootr (@TheSootr) December 4, 2023