ರಾಜ್ಯದಲ್ಲಿ ಕ್ರೈಸ್ತ ಮೀಶಿನರಿ ಶಾಲೆಯಲ್ಲಿ ಹಿಂದೂ ಮಕ್ಕಳಿಗೆ ಗೊಮಾಂಸದ ಆಹಾರ !

ಹಿಂದುಗಳ ಮತಾಂತರದ ಷಡ್ಯಂತ್ರ ಬಹಿರಂಗ !

ಬೆಂಗಳೂರು – ರಾಜ್ಯದ ದಾವಣಗೆರೆಯಲ್ಲಿ ಕ್ರೈಸ್ತ ಮಿಶಿನರಿಗಳಿಂದ ನಡೆಸಲಾಗುತ್ತಿರುವ ಡಾನ್ ಬಾಸ್ಕೋ ಶಾಲೆಯಲ್ಲಿ ಹಿಂದೂ ಮಕ್ಕಳಿಗೆ ಗೋಮಾಂಸ ನೀಡಲಾಗುತ್ತಿದೆ, ಇಂತಹ ಆಘಾತಕಾರಿ ಮಾಹಿತಿ ‘ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ’ದ (ಎಸ್.ಸಿ.ಪಿ.ಸಿ.ಆರ್.ನ) ಅಧ್ಯಕ್ಷ ಪ್ರಿಯಾಂಕ ಕಾನೂನಗೋ ಇವರು ನೀಡಿದರು.

ಅವರು ಮಾತು ಮುಂದುವರೆಸುತ್ತಾ ,

೧. ಶಾಲೆಯಲ್ಲಿ ಮಕ್ಕಳಿಗೆ ಪೂರೈಸಲಾಗುತ್ತಿರುವ ಆಹಾರ ಪದಾರ್ಥದ ಹೆಸರಿನಲ್ಲಿ ಗೋಮಾಂಸದ ಸಮಾವೇಶ ಕೂಡ ಇರುವುದು ಕಂಡು ಬಂದಿದೆ.

೨. ಎಸ್.ಸಿ.ಪಿ.ಸಿ.ಆರ್.ನ ಸಮೀಕ್ಷೆಯ ತಂಡಕ್ಕೆ ವಸತಿಗೃಹದಲ್ಲಿನ ಅಡುಗೆ ಮನೆಯಲ್ಲಿ ಗೋಮಾಂಸ ಮತ್ತು ಅದನ್ನು ಖರೀದಿಸಿರುವ ಪಾವತಿಗಳು ಸಿಕ್ಕಿವೆ.

೩. ಈ ಮಿಶಿನರಿ ಶಾಲೆಯ ವಸತಿಗೃಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಮಕ್ಕಳು ಇದ್ದಾರೆ, ಆದರೂ ಕೂಡ ಎಲ್ಲ ಮಕ್ಕಳಿಗೆ ಕ್ರೈಸ್ತ ಧರ್ಮದ ಪ್ರಕಾರ ಆಚರಣೆ ಮಾಡಲು ಅನಿವಾರ್ಯಗೊಳಿಸಲಾಗುತ್ತದೆ. ಇಲ್ಲಿ ಗೋಮಾಂಸ ಬೇಯಿಸಲಾಗುತ್ತದೆ. ಈ ಪ್ರಕರಣದಲ್ಲಿ ಅವಶ್ಯಕ ಕ್ರಮ ಕೈಗೊಳ್ಳುವುದಕ್ಕಾಗಿ ಶಾಲೆಯ ಆಡಳಿತಕ್ಕೆ ನೋಟಿಸ್ ಕಳುಹಿಸಲಾಗಿದೆ.

೪. ‘ವಸತಿಗೃಹದಲ್ಲಿನ ಮಹಿಳೆಯರು ನಮಗೆ ಕ್ರೈಸ್ತ ಧರ್ಮದ ಪ್ರಕಾರ ಶಿಕ್ಷಣ ನೀಡುತ್ತಾರೆ’, ಎಂದು ವಸತಿಗೃಹದಲ್ಲಿ ನಮ್ಮ ಮಕ್ಕಳು ಆರೋಪಿಸಿದ್ದಾರೆ. ಮಿಶಿನರಿ ಶಾಲೆ ಹಣದ ಲಾಭಕ್ಕಾಗಿ ಮಕ್ಕಳನ್ನು ಅವರ ಇಚ್ಛೆಯ ವಿರುದ್ಧ ವಸತಿಗೃಹದಲ್ಲಿ ಇಡುತ್ತಾರೆ ಹಾಗೂ ಅವರಿಗೆ ಅವರ ಕುಟುಂಬದಿಂದ ದೂರ ಇರಿಸುತ್ತಾರೆ. ಇದು ಎಲ್ಲಾ ಸ್ಥಳೀಯ ಅಧಿಕಾರಿಗಳ ಹೋದಾಣಿಕೆಯಿಂದ ನಡೆಯುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಶಿಕ್ಷಣದ ಹೆಸರಿನಲ್ಲಿ ಮತಾಂತರದ ದುಷ್ಕೃತ್ಯದಲ್ಲಿ ತೊಡಗಿರುವ ಕ್ರೈಸ್ತ ಮಿಶಿನರಿ ಶಾಲೆಯ ಮೇಲೆ ಈಗ ದೇಶದಲ್ಲಿ ನಿಷೇದ ಹೇರಬೇಕು !