ಬೆಳ್ತಂಗಡಿಯಲ್ಲಿ ಟಿಪ್ಪು ಸುಲ್ತಾನ ಧ್ವಂಸಗೊಳಿಸಿ ಭೂಮಿಯಲ್ಲಿ ಹೂಳಿದ್ದ ಗೋಪಾಲಕೃಷ್ಣ ದೇವಾಲಯದ ಅವಶೇಷಗಳು ಪತ್ತೆ !

ಲಕ್ಷ್ಮಣ ಹೆಸರಿನ ವ್ಯಕ್ತಿಗೆ ಶ್ರೀ ಕೃಷ್ಣನು ಕನಸಿನಲ್ಲಿ ದೃಷ್ಟಾಂತದ ಮೂಲಕ ನೀಡಿದ ಮಾಹಿತಿಯ ನಂತರ ಉತ್ಖನನ !

ಮಂಗಳೂರು – ರಾಜ್ಯದ ಬೆಳ್ತಂಗಡಿಯಲ್ಲಿ ಲಕ್ಷ್ಮಣ ಹೆಸರಿನ ವ್ಯಕ್ತಿಗೆ ಭಗವಾನ ಶ್ರೀಕೃಷ್ಣನು ಕನಸಿನಲ್ಲಿ ಕಾಣಿಸಿಕೊಂಡನು ಮತ್ತು ಅವನ ಜಮೀನಿನ ಪಕ್ಕದ ಜಮೀನಿನಲ್ಲಿ ಮೂರ್ತಿಯಿದೆಯೆಂದು ಹೇಳಿದನು. ಇದಾದ ಬಳಿಕ ಲಕ್ಷ್ಮಣನು ತನ್ನ ಜಮೀನಿನ ಪಕ್ಕದಲ್ಲಿರುವ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕೃಷಿ ಮಾಡುತ್ತಿದ್ದ ಹಾಮಾದ ಬಾಬಾ ಅವರ ಜಮೀನನ್ನು ಅಗೆದಾಗ ಭಗ್ನಗೊಂಡಿದ್ದ ಪುರಾತನವಾದ ಗೋಪಾಲಕೃಷ್ಣ ದೇವಸ್ಥಾನದ ಅವಶೇಷಗಳು ಪತ್ತೆಯಾಗಿವೆ. ನೂರಾರು ವರ್ಷಗಳ ಇತಿಹಾಸವಿರುವ ಈ ದೇವಾಲಯವು ಟಿಪ್ಪು ಸುಲ್ತಾನನ ಆಕ್ರಮಣದಿಂದ ನಾಶವಾಯಿತು. ಗ್ರಾಮದ ಹಿರಿಯ ನಾಗರಿಕರು ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಲು ನಿರ್ಧರಿಸಿದ್ದಾರೆ.