ಶ್ರೀ ಹನುಮಾನ ದೇವಸ್ಥಾನದ ಮೇಲೆ ಮಾಂಸ ಎಸೆತ !

೪ ತಿಂಗಳಲ್ಲಿ ಮೂರನೇ ಘಟನೆ

ಔರಂಗಾಬಾದ (ಬಿಹಾರ) – ಬಿಹಾರದ ಔರಂಗಾಬಾದ ಜಿಲ್ಲೆಯಲ್ಲಿ ಅಮಝರಶರೀಫ್ ಪಂಚಾಯತಿ ಕ್ಷೇತ್ರದಲ್ಲಿ ಶ್ರೀ ಹನುಮಾನ ದೇವಸ್ಥಾನದಲ್ಲಿ ಸಮಾಜ ಕಂಟಕರಿಂದ ಮಾಂಸ ಎಸದಿರುವ ಘಟನೆ ಇತ್ತೀಚಿಗೆ ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ಅಸಮಾಧಾನ ಗೊಂಡ ಗ್ರಾಮಸ್ಥರು ಗುಂಪು ತೀವ್ರವಾಗಿ ಘೋಷಣೆಗಳ ನೀಡುತ್ತಾ ಪ್ರತಿಭಟನೆ ನಡೆಸಲಾಯಿತು. ಈ ದೇವಸ್ಥಾನದಲ್ಲಿ ಮಾಂಸಯಸೆಯುವ ಇದು ನಾಲ್ಕು ತಿಂಗಳಲ್ಲಿನ ಮೂರನೆಯ ಘಟನೆ ಆಗಿರುವುದೆಂದು ಗ್ರಾಮಸ್ಥರು ಹೇಳಿದರು. ಈ ಘಟನೆಯ ಮಾಹಿತಿ ದೊರೆಯುತ್ತಲೇ ದೌಡನಗರದ ಉಪಜಿಲ್ಲಾ ಅಧಿಕಾರಿ ಮನೋಜ ಕುಮಾರ ಮತ್ತು ಪೊಲೀಸ ಅಧಿಕಾರಿ ಕುಮಾರ ಋಷಿರಾಜ ಇವರ ಸಹಿತ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದರು. ಗ್ರಾಮಸ್ಥರು ತಾಳ್ಮೆಯಿಂದ ಇರುವಂತೆ ಸಲಹೆ ನೀಡುವುದರ ಜೊತೆಗೆ ಆರೋಪಿಯನ್ನು ಬಂಧಿಸುವಲ್ಲಿ ಯಾವುದೇ ಕೊರತೆ ಇರುವುದಿಲ್ಲ, ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದರು. (ಭಾರತದಲ್ಲಿ ಸಂಯಮದಿಂದ ಇರಲು ಕೇವಲ ಹಿಂದುಗಳಿಗೆ ಸಲಹೆ ನೀಡಲಾಗುತ್ತದೆ, ಇದನ್ನ ತಿಳಿದುಕೊಳ್ಳಿ ! – ಸಂಪಾದಕರು) ಪೊಲೀಸರು ಈ ಪ್ರಕರಣದಲ್ಲಿ ತನಿಖೆ ಮುಂದುವರೆಸಿದ್ದಾರೆ.