|

ನವದೆಹಲಿ – ಇಲ್ಲಿ ಅಪಘಾತದಲ್ಲಿ ಗಾಯಗೊಂಡ ಯುವಕನ ಸಹಾಯಕ್ಕಾಗಿ ಯಾರು ಮುಂದೆ ಬರದ ಕಾರಣ ಅವನ ಮೃತ್ಯುವಾಯಿತು. ಯುವಕನು ಸಹಾಯ ಕೇಳುತ್ತಿರುವಾಗ ಜನರು ಅವನ ವಿಡಿಯೋ ಮಾಡುತಿದ್ದರು. ಈ ಯುವಕನ ಮೊಬೈಲ್ ಮತ್ತು ಲ್ಯಾಪ್ಟಾಪ್ ಅನ್ನು ಕಳ್ಳರು ಈ ಸಮಯದಲ್ಲಿ ಕಳವು ಮಾಡಿದರು. ಪಿಯೂಷ್ ಪಾಲ(೩೦ ವರ್ಷ) ಎಂಬುದು ಈ ಯುವಕನ ಹೆಸರಾಗಿದೆ. ಈ ಘಟನೆಯಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ಎಂದಿನಂತೆ ಪಿಯುಷನು ರಾತ್ರಿ ಸುಮಾರು ೯.೪೫ ಗಂಟೆಯ ಸಮಯದಲ್ಲಿ ಔಟರ್ ರಿಂಗ್ ರೋಡ್ ದಿಂದ ಬೈಕ್ ನಲ್ಲಿ ಹೋಗುತ್ತಿದ್ದನು. ಅನಿರೀಕ್ಷಿತವಾಗಿ ಅವನ ಬೈಕ್ ಅಪಘಾತಕೀಡಾಯಿತು. ಅದರ ನಂತರ ಅವನು ರಸ್ತೆಯಲ್ಲಿ ಸಹಾಯಕ್ಕಾಗಿ ಯಾಚಿಸುತ್ತಿದ್ದನು. ಅದೇ ಸಮಯದಲ್ಲಿ ಕಳ್ಳರು ಅವನ ಮೊಬೈಲ್ ಕದ್ದರು ಆ ಸಮಯದಲ್ಲಿ ಮೊಬೈಲಲ್ಲಿ ಅವನ ಪೋಷಕರ ಫೋನ್ ಬಂದಿರುವಾಗ ಕಳ್ಳರು ಅದನ್ನು ಕಟ್ ಮಾಡಿ ನಂತರ ಫೋನ್ ಸ್ವಿಚ್ ಆಫ್ ಮಾಡಿದರು. ಅಪಘಾತ ಪಿಯೂಷ್ನ ಮನೆಯ ಹತ್ತಿರವೇ ನಡೆದಿತ್ತು. ಆದ್ದರಿಂದ ಅವನ ಫೋನ್ ಕರೆ ಸ್ವೀಕರಿಸಿ ಅವರ ಮನೆಯವರಿಗೆ ಮಾಹಿತಿ ನೀಡಿದ್ದರೆ ಅವನ ಜೀವ ಉಳಿಯುತ್ತಿತ್ತು. ಪಂಕಜ ಜೈನ್ ಎಂಬ ಯುವಕನು ಪಿಯುಷನನ್ನು ಆಸ್ಪತ್ರೆಗೆ ಕರೆದು ಕೊಂಡು ಹೋದನು ; ಆದರೆ ಅಷ್ಟೊತ್ತಿಗೆ ಪಿಯುಷನು ಸಾವನ್ನಪ್ಪಿದ್ದನು.
ಸಂಪಾದಕೀಯ ನಿಲುವು
|
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !