|

ನವದೆಹಲಿ – ಇಲ್ಲಿ ಅಪಘಾತದಲ್ಲಿ ಗಾಯಗೊಂಡ ಯುವಕನ ಸಹಾಯಕ್ಕಾಗಿ ಯಾರು ಮುಂದೆ ಬರದ ಕಾರಣ ಅವನ ಮೃತ್ಯುವಾಯಿತು. ಯುವಕನು ಸಹಾಯ ಕೇಳುತ್ತಿರುವಾಗ ಜನರು ಅವನ ವಿಡಿಯೋ ಮಾಡುತಿದ್ದರು. ಈ ಯುವಕನ ಮೊಬೈಲ್ ಮತ್ತು ಲ್ಯಾಪ್ಟಾಪ್ ಅನ್ನು ಕಳ್ಳರು ಈ ಸಮಯದಲ್ಲಿ ಕಳವು ಮಾಡಿದರು. ಪಿಯೂಷ್ ಪಾಲ(೩೦ ವರ್ಷ) ಎಂಬುದು ಈ ಯುವಕನ ಹೆಸರಾಗಿದೆ. ಈ ಘಟನೆಯಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ಎಂದಿನಂತೆ ಪಿಯುಷನು ರಾತ್ರಿ ಸುಮಾರು ೯.೪೫ ಗಂಟೆಯ ಸಮಯದಲ್ಲಿ ಔಟರ್ ರಿಂಗ್ ರೋಡ್ ದಿಂದ ಬೈಕ್ ನಲ್ಲಿ ಹೋಗುತ್ತಿದ್ದನು. ಅನಿರೀಕ್ಷಿತವಾಗಿ ಅವನ ಬೈಕ್ ಅಪಘಾತಕೀಡಾಯಿತು. ಅದರ ನಂತರ ಅವನು ರಸ್ತೆಯಲ್ಲಿ ಸಹಾಯಕ್ಕಾಗಿ ಯಾಚಿಸುತ್ತಿದ್ದನು. ಅದೇ ಸಮಯದಲ್ಲಿ ಕಳ್ಳರು ಅವನ ಮೊಬೈಲ್ ಕದ್ದರು ಆ ಸಮಯದಲ್ಲಿ ಮೊಬೈಲಲ್ಲಿ ಅವನ ಪೋಷಕರ ಫೋನ್ ಬಂದಿರುವಾಗ ಕಳ್ಳರು ಅದನ್ನು ಕಟ್ ಮಾಡಿ ನಂತರ ಫೋನ್ ಸ್ವಿಚ್ ಆಫ್ ಮಾಡಿದರು. ಅಪಘಾತ ಪಿಯೂಷ್ನ ಮನೆಯ ಹತ್ತಿರವೇ ನಡೆದಿತ್ತು. ಆದ್ದರಿಂದ ಅವನ ಫೋನ್ ಕರೆ ಸ್ವೀಕರಿಸಿ ಅವರ ಮನೆಯವರಿಗೆ ಮಾಹಿತಿ ನೀಡಿದ್ದರೆ ಅವನ ಜೀವ ಉಳಿಯುತ್ತಿತ್ತು. ಪಂಕಜ ಜೈನ್ ಎಂಬ ಯುವಕನು ಪಿಯುಷನನ್ನು ಆಸ್ಪತ್ರೆಗೆ ಕರೆದು ಕೊಂಡು ಹೋದನು ; ಆದರೆ ಅಷ್ಟೊತ್ತಿಗೆ ಪಿಯುಷನು ಸಾವನ್ನಪ್ಪಿದ್ದನು.
ಸಂಪಾದಕೀಯ ನಿಲುವು
|
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!