ಅಲ್ವಾರ್ (ರಾಜಸ್ಥಾನ) – ಉತ್ತರ ಪ್ರದೇಶದಲ್ಲಿ ಕನ್ಹೈ ಲಾಲ್ ಹತ್ಯೆಯಂತಹ ಹತ್ಯಾಕಾಂಡ ನಡೆದಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಲ್ಲಿ ನಡೆದ ಚುನಾವಣಾ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯತೆಯನ್ನು ಟೀಕಿಸಿದ್ದಾರೆ. ಇಲ್ಲಿನ ತಿಜಾರಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಸಂಸದ ಬಾಬಾ ಬಾಲಕನಾಥ್ ಇವರು ಚುನಾವಣಾ ಅರ್ಜಿ ಸಲ್ಲಿಸಿದ್ದಾರೆ. ನಂತರದ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಮಾತನಾಡುತ್ತಿದ್ದರು. ರಾಜಸ್ಥಾನದಲ್ಲಿ ಸಿಂಪಿಗಿತ್ತಿಯಾಗಿದ್ದ ಕನ್ಹಯ್ಯಾಲಾಲ್ ಅವರನ್ನು ಮತಾಂಧರು ಶಿರಚ್ಛೇದ ಮಾಡಿದರು. ಇದನ್ನು ಉಲ್ಲೇಖಿಸಿ ಯೋಗಿ ಆದಿತ್ಯನಾಥ್ ಮೇಲಿನ ಹೇಳಿಕೆ ನೀಡಿದ್ದಾರೆ.ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಮತ್ತು ಗೂಂಡಾಗಿರಿಯನ್ನು ಉತ್ತೇಜಿಸುವ ಸರ್ಕಾರವಾಗಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು. ಉತ್ತರ ಪ್ರದೇಶದಲ್ಲಿ ಯಾವುದೇ ದರೋಡೆಕೋರರು ಅಪರಾಧ ಮಾಡಲು ಧೈರ್ಯ ಮಾಡುವುದಿಲ್ಲ.ದರೋಡೆಕೋರರು ಬಡ ವ್ಯಾಪಾರಿಗಳು ಅಥವಾ ಸಾಮಾನ್ಯ ನಾಗರಿಕರ ಭೂಮಿಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಿಲ್ಲ.ಯಾರಾದರೂ ಹಾಗೆ ಮಾಡಿದಾಗ, ಅವರನ್ನು ಬುಲ್ಡೋಜರ್ ಸರಿ ಮಾಡುತ್ತದೆ. ಹೆಣ್ಣುಮಕ್ಕಳನ್ನು ದುರುಗುಟ್ಟಿ ನೋಡುವ ಧೈರ್ಯ ಯಾರಿಗೂ ಇಲ್ಲ.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ರಾಜಸ್ಥಾನ > ಉತ್ತರ ಪ್ರದೇಶದಲ್ಲಿ ಕನ್ನಯ್ಯ ಲಾಲ್ ನಂಥ ಹತ್ಯಾಕಾಂಡ ನಡೆದಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಗೊತ್ತಾ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದಲ್ಲಿ ಕನ್ನಯ್ಯ ಲಾಲ್ ನಂಥ ಹತ್ಯಾಕಾಂಡ ನಡೆದಿದ್ದರೆ ಅದರ ಪರಿಣಾಮ ಏನಾಗುತ್ತಿತ್ತು ಗೊತ್ತಾ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಸಂಬಂಧಿತ ಲೇಖನಗಳು
- ನಾನಾ ಪಟೋಲೆ ಹೇಳಿಕೆಯು ಹಿಂದೂಗಳಿಗೆ ಅವಮಾನವಾಗಿದ್ದು ಅವರಿಗೆ ಶಿಕ್ಷೆಯಾಗುವುದು ಆವಶ್ಯಕ ! – ಮಹಂತ ನಾರಾಯಣ ಗಿರಿ, ಜುನಾ ಆಖಾಡದ ವಕ್ತಾರ
- ಕಾಂಗ್ರೆಸ್ ಪಕ್ಷಕ್ಕೆ ಪಾಕಿಸ್ತಾನದ ಪರಮಾಣು ಬಾಂಬ್ ಹೆದರಿಕೆಯಿರುವುದರಿಂದಲೇ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸ್ವಾಧೀನವನ್ನು ಕೈ ಬಿಡಲು ಸಿದ್ಧ ! – ಕೇಂದ್ರ ಗೃಹ ಸಚಿವ ಅಮಿತ ಶಹಾ
- ‘ಇಂಡಿಯನ್ ಮುಜಾಹಿದ್ದೀನ್’ ನ ಸಹ-ಸಂಸ್ಥಾಪಕ ಅಬ್ದುಲ ಖುರೇಷಿಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ಜಾಮೀನು !
- ಸೈಬರ್ ಅಪರಾಧ ಮಾಡಿರುವ 28 ಸಾವಿರದ 200 ಮೊಬೈಲ್ ಗಳನ್ನು ‘ಬ್ಲಾಕ್ ಮಾಡಿದ ಕೇಂದ್ರ ಸರ್ಕಾರ’ !
- Pakistan Expresses Happiness: ‘ಕೇಜ್ರಿವಾಲ್ ಬಿಡುಗಡೆ ಭಾರತೀಯರಿಗೆ ಒಳ್ಳೆಯ ಸಂದೇಶವಂತೆ !’
- 7 Crore Cash Found In AP: ಆಂಧ್ರಪ್ರದೇಶದಲ್ಲಿ ಪಲ್ಟಿಯಾಗಿದ್ದ ಟೆಂಪೊದಲ್ಲಿ 7 ಕೋಟಿ ರೂಪಾಯಿ ಪತ್ತೆ !