ಲಡಾಖ್ನ ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಸಗರ ಅಲಿ ಕರಬಲೈ ಇವರ ಮಾನವೀಯ ವಿರೋಧಿ ಹೇಳಿಕೆ !

ಲಡಾಖ್ – ಇಸ್ರೇಲ್ ಮೇಲೆ ದಾಳಿ ನಡೆಸಿದ ಜಿಹಾದಿ ಭಯೋತ್ಪಾದಕ ಸಂಘಟನೆ ಹಮಾಸ್ ಅನ್ನು ಕಾಂಗ್ರೆಸ್ ಕಾರ್ಯಾಧ್ಯಕ್ಷ ಅಸಗರ ಅಲಿ ಕರಬಲೈ ಬೆಂಬಲಿಸಿದ್ದಾರೆ. ‘ಕಾರ್ಗಿಲ್ ಜನರು ಹಮಾಸ್ ಜೊತೆ ನಿಂತಿದ್ದಾರೆ, ಹಮಾಸ್ನ ಸೈನಿಕರೊಂದಿಗೆ ನಿಲ್ಲಲು ನಾವು ಹೆಮ್ಮೆಪಡುತ್ತೇವೆ ಎಂದು ಅವರು ಹೇಳಿದರು. ಅಕ್ಟೋಬರ್ 13 ರಂದು ಇಲ್ಲಿ ಹಮಾಸ್ಅನ್ನು ಬೆಂಬಲಿಸಿ ಮೆರವಣಿಗೆ ನಡೆಯಿತು. ಆಗ ಅವರು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅದರಲ್ಲಿ ಭಾಗವಹಿಸಿದ್ದ ಮುಸ್ಲಿಮರ ಕೈಯಲ್ಲಿ ಇರಾನ್ನ ಪರಮೋಚ್ಚ ನಾಯಕ ಮೊಹಮ್ಮದ್ ಅಲಿ ಖುಮೇನೈ ಅವರ ಫೋಟೋ ಇತ್ತು. (ಇರಾನ್ ನಾಯಕ ಮತ್ತು ಕಾಂಗ್ರೆಸ್ ನಡುವಿನ ಸಂಬಂಧವೇನು ? ಅದರ ಬಗ್ಗೆ ಕಾಂಗ್ರೆಸ್ ಹೇಳುತ್ತದೆಯೇ ? ಅಂತಹ ಮನಸ್ಥಿತಿಯ ಕಾಂಗ್ರೆಸ್ಸಿಗರು ಭಾರತವನ್ನು ಎಂದಿಗೂ ಪ್ರೀತಿಸುತ್ತಾರೆಯೇ ? – ಸಂಪಾದಕರು) ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುವ ನಿರ್ಣಯವನ್ನು ಕಾಂಗ್ರೆಸ್ಸಿನ ರಾಷ್ಟ್ರೀಯ ಕಾರ್ಯಕಾರಿಣಿ ಈಗಾಗಲೇ ಅಂಗೀಕರಿಸಿದೆ.

ಅಸಗರ ಅಲಿ ಕರಬಲೈ ಅವರು ಮಾತನಾಡುತ್ತಾ, ಪ್ಯಾಲೆಸ್ಟೈನ್ ಮೇಲೆ ಬಾಂಬ್ ದಾಳಿ ಮಾಡುವುದರಿಂದ ಹಮಾಸ್ ಮತ್ತು ಅದರ ಸೈನಿಕರು ತಲೆಬಾಗುವರು ಎಂದು ಇಸ್ರೇಲ್ ಗೆ ಅನಿಸಬಹುದು; ಆದರೆ ಅದು ತಪ್ಪು. ಈ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ತಂದೆ-ತಾಯಿ, ಸಹೋದರರು, ಇತ್ಯಾದಿ ನಿಂತು ಇಸ್ರೇಲ್ ಅನ್ನು ಕೊನೆಗಾಣಿಸುವಂತೆ ಸಂದೇಶ ನೀಡಲಿದ್ದಾರೆ ಎಂದರು.
ಸಂಪಾದಕೀಯ ನಿಲುವುಹಮಾಸ್ ಅನೇಕ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಕೊಂದರು, 40 ಚಿಕ್ಕ ಮಕ್ಕಳ ಕತ್ತು ಸೀಳಿದರು, ಗರ್ಭಿಣಿಯರ ಹೊಟ್ಟೆಯನ್ನು ಹರಿದು, ಶಿಶುಗಳನ್ನು ಹೊರತೆಗೆದು ಇಬ್ಬರನ್ನೂ ಕೊಂದರು. ಅಂತಹ ರಾಕ್ಷಸರನ್ನೂ ನಾಚಿಸುವಂತಹ ಕೃತ್ಯಗಳನ್ನು ಮಾಡುವವ ಬಗ್ಗೆ ಹೆಮ್ಮೆ ಪಡುವ ಕಾಂಗ್ರೆಸ್ಸಿನ ನಾಯಕರ ಮಾನಸಿಕತೆ ಏನಿದೆ?, ಎಂಬುದು ಗಮನಕ್ಕೆ ಬರುತ್ತದೆ ! ಇಂತಹ ಕಾಂಗ್ರೆಸ್ ಮೇಲೆ ನಿಷೇಧ ಹೇರಬೇಕು ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !