ಗ್ರಂಥಾಲಯ ಪ್ರವೇಶಿಸುವ ಮೊದಲು ಪುಸ್ತಕದ ಬದಲು ಸರಾಯಿಯ ದುರ್ವಾಸನೆ

ಹುಬ್ಬಳ್ಳಿ : ಜ್ಞಾನದಾಹಿಗಳಿಗೆ,ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆಂದು ಸರಕಾರ ಗ್ರಂಥಾಲಯವನ್ನು ಸ್ಥಾಪಿಸುತ್ತದೆ. ಆದರೆ ಹುಬ್ಬಳ್ಳಿಯ ವಿನೋಬಾ ನಗರದ ಕೇಂದ್ರ ಗ್ರಂಥಾಲಯದ ಚಿತ್ರಣವೇ ಬೇರೆಯಾಗಿದೆ. ಈ ಗ್ರಂಥಾಲಯದ ಒಳಗೆ ಕಾಲಿಟ್ಟರೆ ನಮಗೆ ಗ್ರಂಥದ ಸ್ವಾಗತ ಸಿಗುವುದರ ಬದಲು ಬಿಯರ್ ಬಾಟಲಿಗಳಿಂದ ಸ್ವಾಗತ ಸಿಗುತ್ತದೆ. ಇಲ್ಲಿ ಜನರು ಓದೋದಕ್ಕೆ ಬರದೇ ಕುಡುಕರ ಅಡ್ಡೆಯಾಗಿ ಪರಿವರ್ತಿಸಿದ್ದಾರೆ.
(ಸೌಜನ್ಯ – PowerTV)
ಗ್ರಂಥಾಲಯವನ್ನು ಹೊರಗಡೆಯಿಂದ ನೋಡಿದರೆ ಕೊಂಪೆಯಂತಾಗಿದೆ, ಇದರ ವ್ಯವಸ್ಥಾಪನೆಯನ್ನು ಸಹ ಸರಿಯಾಗಿ ಮಾಡುತ್ತಿಲ್ಲ, ಗ್ರಂಥಾಲಯದ ಒಳಗೆ ಹೋದರೆ ಗ್ರಂಥ, ಪತ್ರಿಕೆಗಳ ದರ್ಶನವಾಗುವುದರ ಬದಲು ರಾಶಿ ರಾಶಿ ಬಿಯರ್ ಬಾಟಲಿಗಳ ದರ್ಶನವಾಗುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಈ ಗ್ರಂಥಾಲಯದ ಅವ್ಯವಸ್ಥೆಯ ವಿಡಿಯೋಗಳು ಈಗ ಸಾಮಾಜಿಕ ಜಾಲದಲ್ಲಿ ಹರಿದಾಡುತ್ತ ಇದೆ. ಗ್ರಂಥಾಲಯದ ವ್ಯವಸ್ಥಾಪಕರು ಇದ್ದು ಇಲ್ಲದಂತಾಗಿದ್ದು ಇದು ಅಧಿಕಾರಿಗಳ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಸಾರ್ವಜನಿಕರು, ಸ್ಥಳೀಯರು ಮೇಲಾಧಿಕಾರಿಗಳಿಗೆ ದೂರನ್ನು ನೀಡಿದರು ಸಹ ಏನೂ ಪ್ರಯೋಜನವಾಗಿಲ್ಲ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !