ಗ್ರಂಥಾಲಯ ಪ್ರವೇಶಿಸುವ ಮೊದಲು ಪುಸ್ತಕದ ಬದಲು ಸರಾಯಿಯ ದುರ್ವಾಸನೆ

ಹುಬ್ಬಳ್ಳಿ : ಜ್ಞಾನದಾಹಿಗಳಿಗೆ,ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆಂದು ಸರಕಾರ ಗ್ರಂಥಾಲಯವನ್ನು ಸ್ಥಾಪಿಸುತ್ತದೆ. ಆದರೆ ಹುಬ್ಬಳ್ಳಿಯ ವಿನೋಬಾ ನಗರದ ಕೇಂದ್ರ ಗ್ರಂಥಾಲಯದ ಚಿತ್ರಣವೇ ಬೇರೆಯಾಗಿದೆ. ಈ ಗ್ರಂಥಾಲಯದ ಒಳಗೆ ಕಾಲಿಟ್ಟರೆ ನಮಗೆ ಗ್ರಂಥದ ಸ್ವಾಗತ ಸಿಗುವುದರ ಬದಲು ಬಿಯರ್ ಬಾಟಲಿಗಳಿಂದ ಸ್ವಾಗತ ಸಿಗುತ್ತದೆ. ಇಲ್ಲಿ ಜನರು ಓದೋದಕ್ಕೆ ಬರದೇ ಕುಡುಕರ ಅಡ್ಡೆಯಾಗಿ ಪರಿವರ್ತಿಸಿದ್ದಾರೆ.
(ಸೌಜನ್ಯ – PowerTV)
ಗ್ರಂಥಾಲಯವನ್ನು ಹೊರಗಡೆಯಿಂದ ನೋಡಿದರೆ ಕೊಂಪೆಯಂತಾಗಿದೆ, ಇದರ ವ್ಯವಸ್ಥಾಪನೆಯನ್ನು ಸಹ ಸರಿಯಾಗಿ ಮಾಡುತ್ತಿಲ್ಲ, ಗ್ರಂಥಾಲಯದ ಒಳಗೆ ಹೋದರೆ ಗ್ರಂಥ, ಪತ್ರಿಕೆಗಳ ದರ್ಶನವಾಗುವುದರ ಬದಲು ರಾಶಿ ರಾಶಿ ಬಿಯರ್ ಬಾಟಲಿಗಳ ದರ್ಶನವಾಗುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಈ ಗ್ರಂಥಾಲಯದ ಅವ್ಯವಸ್ಥೆಯ ವಿಡಿಯೋಗಳು ಈಗ ಸಾಮಾಜಿಕ ಜಾಲದಲ್ಲಿ ಹರಿದಾಡುತ್ತ ಇದೆ. ಗ್ರಂಥಾಲಯದ ವ್ಯವಸ್ಥಾಪಕರು ಇದ್ದು ಇಲ್ಲದಂತಾಗಿದ್ದು ಇದು ಅಧಿಕಾರಿಗಳ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಸಾರ್ವಜನಿಕರು, ಸ್ಥಳೀಯರು ಮೇಲಾಧಿಕಾರಿಗಳಿಗೆ ದೂರನ್ನು ನೀಡಿದರು ಸಹ ಏನೂ ಪ್ರಯೋಜನವಾಗಿಲ್ಲ.
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ