ದೈಹಿಕ ಸಂಬಂಧಕ್ಕೆ ನಿರಾಕರಿಸಿದ್ದರಿಂದ ಗೆಳತಿ ಮೇಲೆ ಪ್ರೇಮಿಯಿಂದ ಮಾರಣಾಂತಿಕ ಹಲ್ಲೆ !

ಇದು ಸಮಾಜದ ನೈತಿಕತೆ ಮತ್ತು ಸ್ವಾರ್ಥದ ಮನಸ್ಥಿತಿ ಎಷ್ಟು ಕೆಳಮಟ್ಟಕ್ಕೆ ಹೋಗಿದೆ ಎಂಬುದನ್ನು ತೋರಿಸುತ್ತದೆ ! ಸಾಧನೆ ಇಲ್ಲದ ಜೀವನದ ಪರಿಣಾಮವಾಗಿದೆ, ಎಂದು ತಿಳಿಯಿರಿ!

ಗುರುಗ್ರಾಮ (ಹರಿಯಾಣ) – ಇಲ್ಲಿ ಯುವಕನೊಬ್ಬ ‘ಲಿವ್ ಇನ್ ರಿಲೇಶನ್ ಶಿಪ್’ನಲ್ಲಿದ್ದ ತನ್ನ ಗೆಳತಿಯ ಮೇಲೆ ‘ಸ್ಕ್ರೂ ಡೈವರ್’ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಆತನ ಹೆಸರು ಶಿವಂ ಕುಮಾರ ಆಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆತ ತನ್ನ ಪ್ರಯತಮೆಗೆ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಡ ಹೇರಿದ್ದ. ಆಕೆ ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಸಂತ್ರಸ್ತೆ ಪತಿಯಿಂದ ಬೇರ್ಪಟ್ಟು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಆ ಸಮಯದಲ್ಲಿ ಉತ್ತರ ಪ್ರದೇಶದ ಕನೌಜ್ ನಲ್ಲಿ ವಾಸವಿದ್ದ ಶಿವಂ ಕುಮಾರ ಎಂಬಾತನ ಪರಿಚಯವಾಯಿತು. ಇಬ್ಬರೂ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಕಾಲಾನಂತರದಲ್ಲಿ, ಶಿವಂ ಮದುವೆಯ ನೆಪದಲ್ಲಿ ಅವಳೊಂದಿಗೆ ದೈಹಿಕ ಸಂಬಂಧಕ್ಕಾಗಿ ಪ್ರಯತ್ನಿಸಿದ; ಆದರೆ ಸಂತ್ರಸ್ತೆಗೆ ಅವನು ಮದುವೆಯಾಗಿದ್ದಾನೆಂದು ತಿಳಿದಿತ್ತು, ಆದ್ದರಿಂದ ಅವಳು ಸಂಬಂಧವನ್ನು ಹೊಂದಲು ನಿರಾಕರಿಸಿದಳು.