ಮಾರಕಾಸ್ತ್ರದಿಂದ ಪೊಲೀಸರ ಮೇಲೆ ಹಲ್ಲೆ : ಆರೋಪಿ ಅಫ್ರೀದ್ ಖಾನ್ ಬಂಧನ

ಬೆಂಗಳೂರು – ನಗರದ ಚಾಮರಾಜಪೇಟೆಯಲ್ಲಿ ಗಸ್ತು ತಿರುಗುತ್ತಿದ್ದ ಚಾಮರಾಜಪೇಟೆ ಠಾಣೆಯ ಕಾನ್ ಸ್ಟೆಬಲ್ ಗಳಾದ ವಿಜಯಕುಮಾರ ಮತ್ತು ಶಿವಪ್ರಸಾದ ದಾನರೆಡ್ಡಿ ಇವರು ಚಾಮರಾಜಪೇಟೆಯ ಅನಂತರಾಮಯ್ಯ ಕಂಪೌಂಡ್ ನ 2 ನೇ ಕ್ರಾಸ್ ಬಳಿ ಅಫ್ರಿದ್‌ ಖಾನ್‌ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿರುವುದು ಗಮನಿಸಿ ತಪಾಸಣೆಗಾಗಿ (ಎಸಿಸಿಟಿಎನ್ಎಸ್ ಆ್ಯಪ್ ನಲ್ಲಿ – ಇದು ಹಳೇ ಕ್ರಿಮಿನಲ್ ಗಳ ಪತ್ತೆ ಹಚ್ಚುವ ಬೆರಳಚ್ಚು ಪರೀಕ್ಷೆ) ಮುಂದಾದಾಗ ಆರೋಪಿ ಅಫ್ರೀದ್ ಪೊಲೀಸರನ್ನು ಅವಾಚ್ಯ ಪದಗಳಲ್ಲಿ ನಿಂದಿಸಿ ತನ್ನ ಬಳಿ ಇಟ್ಟುಕೊಂಡಿದ್ದ ಮಚ್ಚಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ ಇದನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಶಿವಪ್ರಸಾದ ಇವರ ಎಡಗೈನ ಬೆರಳಿಗೆ ಗಾಯವಾಗಿದೆ. ಇದರಿಂದ ಎಚ್ಚೆತ್ತ ವಿಜಯಕುಮಾರ್ ಇವರು ಆತನನ್ನು ಹಿಡಿದು ಹೊಯ್ಸಳ ಪೊಲೀಸರಿಗೆ ಕರೆಸಿ ಬಂಧಿಸಿದ್ದಾರೆ. ಆತನ ವಿರುದ್ಧ ಸರಕಾರಿ ಅಧಿಕಾರಿಗಳ ಕರ್ತವ್ಯದಲ್ಲಿ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.