
ನವದೆಹಲಿ – ಕೇಂದ್ರ ಸಚಿವ ಪ್ರಲ್ಲಾದ್ ಪಟೇಲ್ ಗೆ ಅಶ್ಲೀಲ ʼವಿಡಿಯೋ ಕರೆʼ ಮಾಡಿ ಅವರಿಂದ ಸುಲಿಗೆಗೆ ಯತ್ನಿಸಿದ ಮೊಹಮ್ಮದ್ ವಕೀಲ್ ಮತ್ತು ಮೊಹಮ್ಮದ್ ಸಾಹಿಬ್ ಎಂಬ ಇಬ್ಬರು ವ್ಯಕ್ತಿಗಳನ್ನು ದೆಹಲಿ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ. ಜೂನ್ ೭ ರಂದು ಪ್ರಲ್ಲಾದ್ ಪಟೇಲ್ ವಾಟ್ಸಾಪ್ ನಲ್ಲಿ ವೀಡಿಯೊ ಕರೆ ಸ್ವೀಕರಿಸಿದ್ದರು. ಅವರು ಅದನ್ನು ಒಪ್ಪಿಕೊಂಡಾಗ, ಅದರಲ್ಲಿ ಅಶ್ಲೀಲ ವೀಡಿಯೊ ಕಾಣಿಸಿಕೊಂಡಿತು. ಆದ್ದರಿಂದ ಅವರು ಅದನ್ನು ಕಟ್ ಮಾಡಿದರು. ಸ್ವಲ್ಪ ಹೊತ್ತಿನ ನಂತರ ಮತ್ತೆ ಅದೇ ಕರೆ ಬಂದಿದ್ದು, ನಂತರವೂ ಅಶ್ಲೀಲ ವಿಡಿಯೋ ಪ್ಲೇ ಆಗಿದೆ. ಈ ವೇಳೆ ಕರೆ ಮಾಡಿದವರು ಪಟೇಲ್ ಅವರು ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿರುವ ವೀಡಿಯೊವನ್ನು ಪ್ರಸಾರ ಮಾಡುವ ಮೂಲಕ ಪಟೇಲ್ ಅವರನ್ನು ಮಾನನಷ್ಟಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.
केंद्रीय मंत्री प्रल्हाद पटेल यांना सेक्सटोर्शन कॉलद्वारे ब्लॅकमेल करण्याचा प्रयत्न केल्याचे प्रकरण समोर आले आहे.#PralhadPatel https://t.co/wdNKSpfw0M
— Saamana (@SaamanaOnline) July 26, 2023
ಇಂತಹ ಅಪಕೀರ್ತಿಯನ್ನು ತಡೆಯಲು ಪಟೇಲರಿಂದ ಲಕ್ಷಗಟ್ಠಲೆ ರೂಪಾಯಿಗಳ ಸುಲಿಗೆಗೆ ಬೇಡಿಕೆಯಿಟ್ಟರು. ಈ ವಿಷಯವಾಗಿ ಪಟೇಲ್ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಮೇಲಿನ ಇಬ್ಬರನ್ನು ಬಂಧಿಸಿದ್ದಾರೆ. ಈ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಮೊಹಮ್ಮದ್ ಸಬೀರ್ ಆಗಿದ್ದಾನೆ. ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. ಈ ಮೂಲಕ ಜನರನ್ನು ಸಂಪರ್ಕಿಸಿ ಹಣ ವಸೂಲಿ ಮಾಡುವ ತಂಡವೊಂದು ಕೆಲಸ ಮಾಡುತ್ತಿರುವ ಬಗ್ಗೆ ಪೊಲಿಸರಿಗೆ ಮಾಹಿತಿ ಸಿಕ್ಕಿದೆ.
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ
ಪೋಷಕರು ಮತ್ತು ಹಿರಿಯರು ಇಂದಿನ ಯುವ ಪೀಳಿಗೆಯೊಂದಿಗೆ ಸಂವಾದ ನಡೆಸಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನ್ ಜಿ ಭಾಗವತ್
ಸರಕಾರದೊಂದಿಗೆ ರಾಜಿ ಮಾಡಿಕೊಳ್ಳಬೇಕಿದ್ದರೆ, ೨೬ ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸುವ ಅಗತ್ಯವಿರಲಿಲ್ಲ! – Sonam Wangchuk
ನ್ಯಾಯಾಲಯವೆಂದರೆ ೨೪ ಗಂಟೆಗಳ ಕಾಲ ನಡೆಯುವ ಮನರಂಜನಾ ವಾಹಿನಿಯಲ್ಲ ! – Supreme Court
ಮುಖ್ಯ ಆರೋಪಿ ಬ್ರಿಜೇಂದ್ರ ಗುಪ್ತನನ್ನು ಬಿಹಾರದಿಂದ ಬಂಧಿಸಿದ ಪೊಲೀಸರು!