ಕರ್ಣಾವತಿಯಲ್ಲಿ ಭೀಕರ ಅಪಘಾತ 9 ಜನರ ಸಾವು ಹಾಗೂ 15 ಜನರಿಗೆ ಗಾಯ

ಕರ್ಣಾವತಿ (ಗುಜರಾತ್) – ಜುಲೈ 19 ರ ರಾತ್ರಿ ಇಸ್ಕಾನ್ ಸೇತುವೆಯ ಮೇಲೆ ಜಾಗ್ವಾರ್ ಕಾರು 25 ಜನರಿಗೆ ಢಿಕ್ಕಿ ಹೊಡೆದಿದೆ. ಇದರಲ್ಲಿ 9 ಜನ ಸಾವನ್ನಪ್ಪಿದ್ದರೆ, 15 ಜನ ಗಾಯ ಗೊಂಡಿದ್ದಾರೆ. ಮೃತರಲ್ಲಿ ಒಬ್ಬ ಪೋಲಿಸ್ ಪೇದೆ ಮತ್ತು ಒಬ್ಬ ಗೃಹರಕ್ಷಕ ದಳದ ಯೋಧ ಸೇರಿದ್ದಾರೆ.

ಮಹೀಂದ್ರ ಥಾರ್ ಹೆಸರಿನ ಕಾರು ಸೇತುವೆಯ ಡಂಪರಗೆ ಢಿಕ್ಕಿ ಹೊಡೆದಿತ್ತು. ಈ ಅಪಘಾತವನ್ನು ವೀಕ್ಷಿಸಲು ಹೆಚ್ಚಿನ ಜನರು ಸೇರಿದ್ದರು. ಈ ಸಂದರ್ಭದಲ್ಲಿ ರಾಜಪಥ ಕ್ಲಬ್ ಕಡೆಯಿಂದ ಗಂಟೆಗೆ 160 ಕಿ. ಮೀ. ವೇಗದಿಂದ ಬರುತ್ತಿದ್ದ ಜಾಗ್ವಾರ್ ಕಾರು ಈ ಜನರಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ 9 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಜಾಗ್ವಾರ್ ಗಾಡಿಯ ಚಾಲಕನು ಗಾಯಗೊಂಡಿದ್ದಾನೆ.