ಗುಜರಾತ್‌ನಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಪ್ರಸಾರ ಮಾಡಿದ್ದರಿಂದ ಹಿಂಸಾಚಾರ !

7 ಜನರಿಗೆ ಗಾಯ 8 ಮತಾಂಧ ಮುಸಲ್ಮಾನರ ಬಂಧನ

ಗಾಂಧಿನಗರ(ಗುಜರಾತ್) – ಇಲ್ಲಿಯ ಪಾಟಣನ ಬಾಲಿಸಾನಾ ಗ್ರಾಮದಲ್ಲಿ ಮುಸಲ್ಮಾನರಿಗೆ ಸಂಬಂಧಿತ ಆಕ್ಷೇಪಾರ್ಹ ಧಾರ್ಮಿಕ ಮಾಹಿತಿಯನ್ನು ಪ್ರಸಾರ ಮಾಡಿದ್ದರಿಂದ ನಡೆದ ಹಿಂಸಾಚಾರದಲ್ಲಿ 7 ಜನರು ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದ 12 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 8 ಮತಾಂಧ ಮುಸಲ್ಮಾನರನ್ನು ಮಸೀದಿಯ ಚೌಕ್ ಪರಿಸರದಿಂದ ಬಂಧಿಸಿದ್ದಾರೆ.ಈ ಮಾಹಿತಿ ಪ್ರಸಾರವಾದ ನಂತರ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಈ ಪ್ರಕರಣದ ವಿಚಾರವಾಗಿ ಮಸೀದಿಯ ಬಳಿ ಎರಡು ಗುಂಪುಗಳ ನಡುವೆ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ವಾಗ್ವಾದ ನಡೆದು ಹಿಂಸಾಚಾರ ನಡೆಯಿತು. ಇದರ ಮಾಹಿತಿ ಸಿಗುತ್ತಲೇ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಈ ಗ್ರಾಮದ ಒಂದು ಸಾಮಾಜಿಕ ಗುಂಪಿನಲ್ಲಿ ಈ ಮಾಹಿತಿಯನ್ನು ಪ್ರಸಾರ ಮಾಡಲಾಗಿತ್ತು. ಇದರಿಂದ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿ ಉದ್ವಿಗ್ನತೆ ಉಂಟಾಯಿತು.