ನವಸಾರಿ (ಗುಜರಾತ) ಇಲ್ಲಿ `ಲವ್ ಜಿಹಾದ್’ನ ಬೇರೆ ರೀತಿಯ ಪ್ರಕರಣ ಬಹಿರಂಗ !

  • ಅಸೀಮ್ ಶೇಖ್ ನು ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ಹಿಂದೂ ಸ್ನೇಹಿತನೊಂದಿಗೆ ಮದುವೆ !

  • ವಿವಾಹದ ಬಳಿಕ ಶೇಖ ಹುಡುಗಿಯ ಮೇಲೆ ಬಲಾತ್ಕಾರ ಮಾಡುತ್ತಿದ್ದ !

  • ಶೇಖನ ಬಂಧನ, ಹಿಂದೂ ಪತಿ ಪರಾರಿ !

ಕರ್ಣಾವತಿ (ಗುಜರಾತ) – ರಾಜ್ಯದ ನವಸಾರಿ ಜಿಲ್ಲೆಯಲ್ಲಿ ಲವ್ ಜಿಹಾದ್ ನ ಒಂದು ವಿಚಿತ್ರ ಪ್ರಕರಣ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಕುಖ್ಯಾತ ಗೂಂಡಾ ಮತ್ತು ವಿವಾಹಿತ ಅಸೀಮ್ ಶೇಖ್ ಓರ್ವ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ಅವಳೊಂದಿಗೆ ವಿವಾಹವಾಗುವ ಆಶ್ವಾಸನೆಯನ್ನು ನೀಡಿ ಅವಳ ಅಶ್ಲೀಲ ಛಾಯಾಚಿತ್ರಗಳನ್ನು ತೆಗೆದನು. ಕಾಲಾಂತರದಲ್ಲಿ ಅವಳ ಕುಟುಂಬದವರು ಓರ್ವ ಹಿಂದೂ ಹುಡುಗನೊಂದಿಗೆ ಅವಳ ವಿವಾಹವನ್ನು ಮಾಡಲು ನಿರ್ಧರಿಸಿದಾಗ ಶೇಖನು ಅವಳ ಛಾಯಾಚಿತ್ರವನ್ನು ಆ ಹುಡುಗನಿಗೆ ಕಳುಹಿಸಿ ವಿವಾಹವನ್ನು ಮುರಿದನು. ತದನಂತರ ಶೇಖನು ತನ್ನ ಹಿಂದೂ ಸ್ನೇಹಿತ ರೌನಕ ಪಟೇಲನೊಂದಿಗೆ ಬಲವಂತವಾಗಿ ವಿವಾಹ ಮಾಡಿಸಿದನು.

ವಿವಾಹದ ಬಳಿಕ ಶೇಖ ಅವಳ ಮೇಲೆ ಬಲಾತ್ಕಾರ ಮಾಡುತ್ತಿದ್ದನು. ಸಂತ್ರಸ್ತೆಯು ಈ ಪ್ರಕರಣದಲ್ಲಿ ಶೇಖ ಮತ್ತು ಪಟೇಲ್ ವಿರುದ್ಧ ದೂರು ದಾಖಲಿಸಿದಳು. ಈ ಪ್ರಕರಣದಲ್ಲಿ ಲವ್ ಜಿಹಾದ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಯಿತು. ರಾಜ್ಯದ ಗೃಹಸಚಿವ ಹರ್ಷ್ ಸಂಘ್ವಿಯವರು ಈ ಪ್ರಕರಣದ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಕೊಳ್ಳುವಂತೆ ಆದೇಶಿಸಿದ್ದಾರೆ. ತದನಂತರ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸಿ ಅಸೀಮ್ ಶೇಖನನ್ನು ಮುಂಬಯಿಯಿಂದ ಬಂಧಿಸಿದ್ದರು. ರೌನಕ ಪಟೇಲ ಪರಾರಿಯಾಗಿದ್ದು ಅವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ನವಸಾರಿಯ ಪೊಲೀಸ ಅಧೀಕ್ಷಕ ಋಷಿಕೇಶ ಉಪಾಧ್ಯಾಯ ಇವರು ನೀಡಿರುವ ಮಾಹಿತಿಯನುಸಾರ ಅಸೀಮ ಶೇಖ ಮದ್ಯ ಕಳ್ಳಸಾಗಾಣಿಕೆ ನಡೆಸುತ್ತಾನೆ. ಅವರ ವಿರುದ್ಧ ಕಳ್ಳಸಾಗಾಣಿಕೆಯ ಸಂದರ್ಭದಲ್ಲಿ 31 ಪ್ರಕರಣಗಳು ದಾಖಲಿಸಲಾಗಿದ್ದು, ಇನ್ನೂ ಕೆಲವು ಪ್ರಕರಣಗಳಲ್ಲಿ 5 ದೂರುಗಳನ್ನು ದಾಖಲಿಸಲಾಗಿವೆ. (ಶೇಖ ಮೇಲೆ ಈ ಮೊದಲೇ ಕಠಿಣ ಕ್ರಮವನ್ನು ಕೈಕೊಂಡಿದ್ದರೆ, ಅವನು ಲವ್ ಜಿಹಾದ್ ಷಡ್ಯಂತ್ರವನ್ನು ರಚಿಸುತ್ತಿರಲಿಲ್ಲ. ಸಾಮಾಜಿಕ ಅಸಂವೇದನೆಯನ್ನು ಹೊಂದಿರುವ ಗುಜರಾತ ಪೊಲೀಸರಿಗೆ ಇದು ಲಜ್ಜಾಸ್ಪದ ! – ಸಂಪಾದಕರು)

ಸಂಪಾದಕರ ನಿಲುವು 

ಓರ್ವ ಲವ್ ಜಿಹಾದಿಗೆ ಹಿಂದೂ ಯುವತಿಯ ಜೀವನವನ್ನು ನಾಶ ಮಾಡಲು ಸಹಾಯ ಮಾಡುವ ಹಿಂದೂ ಹಿಂದೂ ಧರ್ಮದ ನಿಜವಾದ ಶತ್ರು !

ಲವ್ ಜಿಹಾದಿಗಳೊಂದಿಗೆ ಇಂತಹ ಹಿಂದೂಗಳಿಗೂ ಕೂಡ ಕಠಿಣ ಶಿಕ್ಷೆ ನೀಡುವುದು ಅಗತ್ಯ !