ಯೋಗಿ ಆದಿತ್ಯನಾಥರನ್ನು ಫ್ರಾನ್ಸಗೆ ಕಳುಹಿಸಿದರೆ 24 ಗಂಟೆಯಲ್ಲಿ ಎಲ್ಲವೂ ಸರಿಹೋಗುತ್ತದೆ !

ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಯುರೋಪ್ ನ ಓರ್ವ ಕ್ರೈಸ್ತ ಡಾಕ್ಟರರ ಬೇಡಿಕೆ !

ನವದೆಹಲಿ – ಫ್ರಾನ್ಸನಲ್ಲಿ ಕಳೆದ 4 ದಿನಗಳಿಂದ ಆಫ್ರಿಕಾ ವಂಶದ ಮತಾಂಧ ಮುಸಲ್ಮಾನರಿಂದ ಭಾರೀ ಪ್ರಮಾಣದಲ್ಲಿ ಹಿಂಸಾಚಾರ ನಡೆಯುತ್ತಿದೆ. ಪೊಲೀಸರ ಮೇಲೆಯೂ ಆಕ್ರಮಣಗಳನ್ನು ನಡೆಯುತ್ತಿದ್ದು, ಇದರಲ್ಲಿ 200 ಕ್ಕಿಂತ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ ಪೊಲೀಸರು 900 ಕ್ಕಿಂತ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಯುರೋಪ್ ನ ಓರ್ವ ಡಾಕ್ಟರ ಹಾಗೂ ಪ್ರಾಧ್ಯಾಪಕರಾಗಿರುವ ಎನ್. ಜಾನ್ ಕ್ಯಾಮ್ ಇವರು ಫ್ರಾನ್ಸನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಕಳುಹಿಸಿಕೊಡುವಂತೆ ಭಾರತ ಸರಕಾರವನ್ನು ಒತ್ತಾಯಿಸಿದ್ದು, ಅವರು 24 ಗಂಟೆಯೊಳಗೆ ಎಲ್ಲವನ್ನೂ ಸರಿಪಡಿಸುತ್ತಾರೆ ಎಂದು ಹೇಳಿದ್ದಾರೆ.

ಯೋಗಿ ಆದಿತ್ಯನಾಥರ ಕಚೇರಿಯಿಂದ ವ್ಯಕ್ತವಾಗಿರುವ ಪ್ರತಿಕ್ರಿಯೆ !

ಡಾ.ಕ್ಯಾಮ್ ಇವರ ಈ ಬೇಡಿಕೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕಚೇರಿಯೂ ಟ್ವೀಟ್ ಮಾಡಿ `ಜಗತ್ತಿನಲ್ಲಿ ಎಲ್ಲಿಯಾದರೂ ಹಿಂಸೆ, ಗಲಭೆ, ಅರಾಜಕತೆ ಹೆಚ್ಚಾದಾಗ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾದಾಗ, ಜಗತ್ತು ಪರಿಹಾರವನ್ನು ಶೋಧಿಸುತ್ತದೆ ಮತ್ತು ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಸ್ಥಾಪಿಸಿರುವ ಕಾನೂನು ಮತ್ತು ಸುವ್ಯವಸ್ಥೆಯ ಪರಿವರ್ತನಕಾರಿ ಯೋಗಿಯ ಪದ್ಧತಿಯನ್ನು ನಿರೀಕ್ಷಿಸುತ್ತಾರೆ’.ಎಂದು ಹೇಳಿದೆ.

 ಸಂಪಾದಕೀಯ ನಿಲುವು

ಯೋಗಿ ಆದಿತ್ಯನಾಥರ ಬಗ್ಗೆ ಈ ಹೊಗಳಿಕೆ ಹಿಂದೂಗಳಿಗೆ ಹೆಮ್ಮೆಯ ವಿಷಯವಾಗಿದೆ. ಈ ಬೇಡಿಕೆಯಿಂದ ಹಿಂದೂಗಳಿಗೆ ಮಾತ್ರವಲ್ಲ ಜಗತ್ತಿನಾದ್ಯಂತ ಇರುವ ಜನರಿಗೆ ಮತಾಂಧರ ಹಿಂಸಾಚಾರವನ್ನು ಹೇಗೆ ನಿಯಂತ್ರಿಸುವುದು ? ಎನ್ನುವುದು ಯೋಗಿ ಆದಿತ್ಯನಾಥರ ಕ್ರಮದಿಂದ ಗಮನಕ್ಕೆ ಬಂದಿದೆಯೆನ್ನುವುದು ಸ್ಪಷ್ಟವಾಗುತ್ತದೆ !