ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಕರೆದುಕೊಂಡು ಹೋಗಿದ್ದ ಮತಾಂಧ ಮುಸಲ್ಮಾನ ಯುವಕ ಹಾಗೂ ಆತನ ತಂದೆಯ ಬಂಧನ

ಉತ್ತರಾಖಂಡದಲ್ಲಿ ಲವ್ ಜಿಹಾದ್ !

ಗಡವಾಲ (ಉತ್ತರಾಖಂಡ) – ಇಲ್ಲಿಯ ಮುಜೀಬ್ ಖಾನ್ ಎಂಬ ಯುವಕನು ಒಬ್ಬ ಹಿಂದೂ ಯುವತಿಯನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿ ಕರೆದುಕೊಂಡು ಹೋಗಿರುವ ಘಟನೆ ನಡೆದಿದೆ. ಇದರಿಂದ ಇಲ್ಲಿಯ ಹಿಂದೂಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಪೊಲೀಸ ಠಾಣೆಗೆ ಹೋಗಿ ವಿರೋಧಿಸಿದ್ದಾರೆ. ಈ ರೀತಿಯ ಘಟನೆಗಳನ್ನು ಸಹಿಸಲಾಗುವುದಿಲ್ಲ, ಪೊಲೀಸರು ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದರ ನಂತರ ಪೊಲೀಸರು ಮುಜೀಬ್ ಖಾನ ಮತ್ತು ಅವನ ತಂದೆ ಬಾಬು ಖಾನ ಇವರನ್ನು ಉತ್ತರಪ್ರದೇಶದ ಬದಾಯುದಿಂದ ಬಂಧಿಸಿದ್ದಾರೆ.