ಜಾರ್ಖಂಡದಲ್ಲಿ ಲವ್ ಜಿಹಾದ್ ಗೆ ಬಲಿಯಾಗಿದ್ದ ಅಪ್ರಾಪ್ತ ಹಿಂದೂ ಹುಡುಗಿ ಆತ್ಮಹತ್ಯೆಗೆ ಶರಣು

ಆರೋಪಿ ಗೋಲು ಅನ್ಸಾರಿ ಮತ್ತು ಮೃತ ಹಿಂದೂ ಹುಡುಗಿ

ರಾಂಚಿ (ಜಾರ್ಖಂಡ್) – ಇಲ್ಲಿ ‘ಲವ್ ಜಿಹಾದ್’ ಗೆ ಬಲಿಯಾಗಿರುವ ೧೭ ವರ್ಷದ ಅಪ್ರಾಪ್ತ ಹಿಂದೂ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಗೋಲು ಅನ್ಸಾರಿ ಈ ಮುಸಲ್ಮಾನ ಯುವಕನು ತಾನು ಹಿಂದೂ ಎಂದು ಹೇಳಿ ಮೋಸ ಮಾಡಿ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಲೈಂಗಿಕ ಕಿರುಕುಳ ನೀಡಿದನು. ಗೋಲು ಅನ್ಸಾರಿಯ ಒತ್ತಡದಿಂದ ಹಿಂದೂ ಯುವತಿಯು ಆತ್ಮಹತ್ಯೆ ಮಾಡಿಕೊಂಡಳು.

೧. ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಮತ್ತು ಭಾಜಪದ ನಾಯಕ ಬಾಬುಲಾಲ್ ಮರಾಂಡಿ ಇವರು ಗೋಲು ಅನ್ಸಾರಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಮರಾಂಡಿ ಇವರು ಟ್ವಿಟರ್ ನಲ್ಲಿ ಸಂತ್ರಸ್ತ ಹುಡುಗಿಯ ತಂದೆ ಪೊಲೀಸರಿಗೆ ಬರೆದಿರುವ ಪತ್ರ ಪೋಸ್ಟ ಮಾಡಿದ್ದಾರೆ.

೨. ಈ ಪತ್ರದ ಪ್ರಕಾರ, ಸಂತ್ರಸ್ತ ಹುಡುಗಿ ದಲಿತ ಜನಾಂಗದವಳಾಗಿದ್ದಾಳೆ. ಆರೋಪಿ ಗೋಲು ಅನ್ಸಾರಿ ಹಿಂದೂ ಎಂದು ಸುಳ್ಳು ಹೇಳಿ ಈ ಯುವತಿಯನ್ನು ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದನು. ಅವನು ದೇವಸ್ಥಾನಕ್ಕೆ ಹೋಗಿ ಆಕೆಯ ಜೊತೆಗೆ ವಿವಾಹ ಮಾಡಿಕೊಳ್ಳುವ ನಾಟಕ ಮಾಡಿದ್ದನು.

೩. ನಂತರ ಹುಡುಗಿಗೆ ಗೋಲು ಅನ್ಸಾರಿ ಮುಸಲ್ಮಾನ ಎಂದು ತಿಳಿದ ನಂತರ ಅವನು ಆಕೆಯ ಮೇಲೆ ಮತಾಂತರಕ್ಕಾಗಿ ಒತ್ತಡ ಹೇರುತ್ತಿದ್ದನು. ಸಂತ್ರಸ್ತೇ ಹುಡುಗಿ ಮತಾಂತರ ಮತ್ತು ಸಾಮಾಜಿಕ ಪರಿಸ್ಥಿತಿಯ ಒತ್ತಡ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಳು.

ಸಂಪಾದಕೀಯ ನಿಲುವು

ಜಾರ್ಖಂಡದಲ್ಲಿ ಹಿಂದೂ ದ್ವೇಷಿ ಜಾರ್ಖಂಡ ಮುಕ್ತಿ ಮೋರ್ಚಾ ಪಕ್ಷದ ಸರಕಾರ ಇರುವುದರಿಂದ ಸಂತ್ರಸ್ತೆಗೆ ನ್ಯಾಯ ದೊರೆಯುವದರ ಬಗ್ಗೆ ಹಿಂದೂಗಳಿಗೆ ಅನುಮಾನ !