ಹಿಂದುತ್ವನಿಷ್ಟ ಸಂಘಟನೆಗಳಿಂದ ಬಂದ್ ಪಾಲನೆ

ಆಷ್ಟಿ (ಬೀಡ ಜಿಲ್ಲೆ) – ಜೈದ ಅಯ್ಯುದ ಸಯ್ಯದನು ಔರಂಗಜೇಬನ ಸ್ಟೇಟಸ್ ಇಟ್ಟಿದ್ದರಿಂದ ನಗರದ ಆಝಾದನಗರದಲ್ಲಿ ಜೂನ 8 ರಂದು ರಾತ್ರಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ ವಿಳಂಬವಾಗಿ ಅವನ ಮೇಲೆ ದೂರನ್ನು ದಾಖಲಿಸಲಾಯಿತು. ಈ ಘಟನೆಯಿಂದ ಹಿಂದುತ್ವನಿಷ್ಠ ಸಂಘಟನೆಗಳು ಜೂನ 9ರಂದು ಬಂದ್ ಆಚರಿಸಿದೆ. ‘ಔರಂಗಜೇಬನನ್ನು ಉದ್ದೇಶಿಸಿ `ಬಾಪ ತೊ ಬಾಪ ರಹೇಗಾ’ ಎಂದು ಅರ್ಥಬರುವ ವಾಕ್ಯವನ್ನು ಬರೆದು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿ 2 ಸಮಾಜದ ನಡುವೆ ದ್ವೇಷ ನಿರ್ಮಾಣವಾಗುವಂತಹ ಕೃತ್ಯವನ್ನು ಮಾಡಿದ’ ಎಂದು ಶುಭಂ ಲೋಖಂಡೆಯವರು ನೀಡಿದ ದೂರನ್ನು ಆಷ್ಟಿ ಪೊಲೀಸ ಠಾಣೆಯಲ್ಲಿ ದಾಖಲಿಸಲಾಗಿತ್ತು. ತದನಂತರ ಜೈದ ಅಯ್ಯುದ ಸಯ್ಯದನ ವಿರುದ್ಧ ಆಷ್ಟಿ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ನಡೆದಿರುವ ಪ್ರಕರಣದ ಬಳಿಕ ಪೊಲೀಸರು ಶಾಂತಿ ಕಾಪಾಡುವಂತೆ ಕರೆ ನೀಡಿದ್ದಾರೆ. ಹಾಗೆಯೇ ಯಾವುದೇ ಗಾಳಿಸುದ್ದಿಯ ಮೇಲೆ ವಿಶ್ವಾಸವನ್ನು ಇಡಬಾರದೆಂದು ಸಹ ಸರಕಾರ ಕರೆ ನೀಡಿದೆ.
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ