ಕೇರಳದಲ್ಲಿ ಮಾನ್ಸೂನ್ ಮಳೆಯ ಆಗಮನ !

ಅರಬ್ಬಿ ಸಮುದ್ರದಲ್ಲಿನ ‘ಬಿಪರಜಾಯ್’ ಚಂಡಮಾರುತ ಪಾಕಿಸ್ತಾನದತ್ತ ವಾಲಿತು !

ನವ ದೆಹಲಿ – ಹವಾಮಾನ ಇಲಾಖೆಯವರು ಈ ವರ್ಷದ ಮಾನ್ಸೂನ್ ಮಳೆ ಕೇರಳಕ್ಕೆ ತಲುಪಿರುವ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಜೂನ್ ೧ ರಂದು ಕೇರಳಕ್ಕೆ ಆಗಮಿಸುವ ಮಾನ್ಸೂನ್ ಮಳೆ ಈ ವರ್ಷ ಒಂದು ವಾರ ತಡವಾಗಿ ಆಗಮಿಸಿದೆ. ಅರಬ್ಬಿ ಸಮುದ್ರದಲ್ಲಿ ‘ಬೀಪರ್‌ಜಾಯ್’ ಚಂಡಮಾರುತವು ಮಾನ್ಸೂನ್ ಮಳೆಯನ್ನು ತಡೆದಿತ್ತು. ಇಗ ಈ ಚಂಡಮಾರುತ ಪಾಕಿಸ್ತಾನದತ್ತ ಸಾಗಿದ್ದರಿಂದ ಕೇರಳದಲ್ಲಿ ಮುಂಗಾರು ಮಳೆಯ ಹಾದಿ ಸುಗಮಗೊಂಡಿದೆ.