ಮನಃಶಾಂತಿ ಮತ್ತು ನಿರೋಗಿ ಜೀವನ ಪ್ರದಾನಿಸುವ ಯೋಗವಿದ್ಯೆ !

ಜೂನ್ ೨೧ ರಂದು ಇರುವ ವಿಶ್ವ ಯೋಗ ದಿನದ ನಿಮಿತ್ತ 

ಭಾರತೀಯ ಋಷಿಮುನಿಗಳ ದೈವೀ ಚಿಂತನೆಯಿಂದ, ಆತ್ಮಸಾಕ್ಷಾತ್ಕಾರದಿಂದ ಪ್ರಕಟವಾಗಿರುವ ಈ ಯೋಗವಿದ್ಯೆಯು, ಯಾವುದೇ ಧರ್ಮಭೇದ, ಜಾತಿಭೇದ, ಲಿಂಗಭೇದವನ್ನು ಮಾಡದೆ ಇಡೀ ಮನುಕುಲದ ಕಲ್ಯಾಣವನ್ನು ಬಯಸುವ ಒಂದು ಈಶ್ವರೀ ವರದಾನವಾಗಿದೆ. ಸಂಸಾರರೂಪಿ ಒಲೆಯಲ್ಲಿ ಬೆಂದಿರುವವರಿಗೆ ಮನಃಶಾಂತಿಯನ್ನು ನೀಡುವ, ವ್ಯಾಧಿಗ್ರಸ್ತರನ್ನು ಶಾರೀರಿಕ ಹಾಗೂ ಮಾನಸಿಕ ಒತ್ತಡದಿಂದ ಮುಕ್ತಗೊಳಿಸುವ, ಯೋಗಸಾಧಕರ ಜೀವವನ್ನು ಶಿವನೊಂದಿಗೆ ಜೋಡಿಸುವ, ಮಾನವನ ಮೋಕ್ಷಪ್ರಾಪ್ತಿಯ ಅಂತಿಮ ಇಚ್ಛೆಯನ್ನು ಪೂರ್ಣಗೊಳಿಸುವ ಯೋಗ ವಿದ್ಯೆ ಇದಾಗಿದೆ.

ನಮ್ಮ ಪರೋಪಕಾರಿ ಪೂರ್ವಜರು ಜಗತ್ತಿನ ಕಲ್ಯಾಣಕ್ಕಾಗಿ ಜೋಪಾನ ಮಾಡಿಟ್ಟಿರುವ ಅಮೂಲ್ಯವಾದ ಖಜಾನೆ ಇದಾಗಿದೆ. ಇಂತಹ ಅಮೂಲ್ಯವಾದ ಬೊಕ್ಕಸದ ವಾರಸುದಾರರು ನಾವಾಗಿದ್ದು ಈ ಯೋಗಭೂಮಿಯಲ್ಲಿ ನಾವು ಜನ್ಮ ಪಡೆದಿರುವುದು ನಮ್ಮ ಸೌಭಾಗ್ಯವಾಗಿದೆ; ಆದರೂ ಬಹಳಷ್ಟು ಭಾರತೀಯರು ಇಂದು ಕೂಡ ಯೋಗವಿದ್ಯೆಯಿಂದ ದೂರವಿದ್ದಾರೆ, ಅದು ಅವರ ದುರ್ದೈವವಾಗಿದೆ. ಜಗತ್ತಿನ ಇತರ ಅನೇಕ ರಾಷ್ಟ್ರಗಳು ಮಾತ್ರ ಯೋಗದ ಬೊಕ್ಕಸದಿಂದ ಸಾಕಷ್ಟು ಲಾಭ ಪಡೆದುಕೊಂಡಿವೆ ಹಾಗೂ ತೆಗೆದುಕೊಳ್ಳುತ್ತಿವೆ. ಭೋಗವಾದ, ಭೌತಿಕವಾದ ಹಾಗೂ ಅನೇಕ ವಿಧದ ವ್ಯಾಧಿಗಳಿಂದ ನರಳುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳ ಜನರಿಗೆ ಮನಃಶಾಂತಿ ಮತ್ತು ನಿರೋಗಿ ಜೀವನ ಬೇಕಾಗಿದೆ. ಅದಕ್ಕಾಗಿ ಇಡೀ ಜಗತ್ತು ಭಾರತದ ಕಡೆಗೆ ಆಶೆಯಿಂದ ನೋಡುತ್ತಿದೆ; ಏಕೆಂದರೆ ಯೋಗವಿದ್ಯೆಯಂತೆ ರಾಮಬಾಣ ಔಷಧವಿರುವ ಭಾರತದ ಹೊರತು ಇತರ ಯಾವುದೇ ದೇಶವು ಜಗತ್ತಿಗೆ ಮನಃಶಾಂತಿ ಮತ್ತು ವ್ಯಾಧಿಮುಕ್ತ ಜೀವನವನ್ನು ನೀಡಲು ಸಾಧ್ಯವಿಲ್ಲ. ಭಾರತೀಯ ಯೋಗವಿದ್ಯೆಯಲ್ಲಿ ಇಷ್ಟು ದೊಡ್ಡ ದಿವ್ಯ ಸಾಮರ್ಥ್ಯ ಹಾಗೂ ಕ್ಷಮತೆಯಿದೆ, ಎಂಬುದನ್ನು ವಿದೇಶದ ಪಂಡಿತರು ಪ್ರತ್ಯಕ್ಷ ಅನುಭೂತಿ ಮತ್ತು ಅನುಭವವನ್ನು ಪಡೆದಿದ್ದಾರೆ.

ದುರ್ಬಲವಾದ ಶರೀರದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಾಮರ್ಥ್ಯ ಯೋಗದಲ್ಲಿದೆ. ರಾಸಾಯನಿಕ ವಿಷಯುಕ್ತ ಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸಿ ಬೆಳೆಸಿದ ದವಸ ಧಾನ್ಯಗಳು, ಹಣ್ಣು- ಹಂಪಲು, ತರಕಾರಿ ಇತ್ಯಾದಿ ತಿಂದು ಕ್ರಮೇಣ ನಮ್ಮ ಶರೀರವು ವ್ಯಾಧಿಗೊಳಗಾಗುತ್ತಿದೆ. ಆದ್ದರಿಂದ ನಮ್ಮ  ಶಾರೀರಿಕ ಹಾಗೂ ಮಾನಸಿಕ ದೌರ್ಬಲ್ಯವೂ ಹೆಚ್ಚಾಗಿದೆ, ಎಂಬುದು ಹೆಚ್ಚಿನವರಿಗೆ ತಿಳಿಯುವುದಿಲ್ಲ. ಹೀಗಿರುವಾಗ ಈ ಯೋಗವಿದ್ಯೆಯು ತುಂಬಾ ಉಪಯುಕ್ತವೆನಿಸುತ್ತದೆ. ವಿಷಯುಕ್ತ ದ್ರವ್ಯಗಳನ್ನು ಹೊರಗೆ ಹಾಕಿ ದುರ್ಬಲ ಶರೀರದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಾಮರ್ಥ್ಯ ಈ ಯೋಗಾಭ್ಯಾಸದಲ್ಲಿದೆ. ಶರೀರವೆಂದರೆ ಒಂದು ಪವಿತ್ರ ‘ಯಜ್ಞಕುಂಡವಾಗಿದೆ, ಅದರ ಪಾವಿತ್ರ್ಯ ಕಾಪಾಡಬೇಕು.

ನಮ್ಮ ಶರೀರವೊಂದು ಪವಿತ್ರವಾದ ‘ಯಜ್ಞಕುಂಡವಾಗಿದೆ. ‘ಮೋಕ್ಷಪ್ರಾಪ್ತಿಯು ಮಾನವನ ಅಂತಿಮ ಧ್ಯೇಯವಾಗಿದೆ.