ಜೂನ್ ೧೫ ರ ಮೊದಲೇ ಅಂಗಡಿ ಖಾಲಿ ಮಾಡಿ ಹೋಗುವಂತೆ ಮುಸಲ್ಮಾನ ಅಂಗಡಿಕಾರರಿಗೆ ಎಚ್ಚರಿಕೆ !

ಉತ್ತರಕಾಶಿ (ಉತ್ತರಾಖಂಡ) ಇಲ್ಲಿಯ ‘ಲವ್ ಜಿಹಾದ್’ ಘಟನೆಯಿಂದ ಆಕ್ರೋಶಗೊಂಡ ಹಿಂದೂಗಳ ಉದ್ರೇಕ !

ಉತ್ತರಕಾಶಿ (ಉತ್ತರಾಖಂಡ) – ಇಲ್ಲಿ ಓರ್ವ ಮುಸಲ್ಮಾನ ಯುವಕನು ಒಬ್ಬ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿರುವ ಘಟನೆಯಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ‘ಮುಸಲ್ಮಾನ್ ಅಂಗಡಿಕಾರರಿಗೆ ಜೂನ್ ೧೫ ರ ವರೆಗೆ ಅಂಗಡಿ ಖಾಲಿ ಮಾಡಲು’ ಎಚ್ಚರಿಕೆ ನೀಡುವ ಭಿತ್ತಿಪತ್ರಕಗಳನ್ನು ಅಲ್ಲಲ್ಲಿ ಅಂಟಿಸಲಾಗಿತ್ತು. ಆದ್ದರಿಂದ ಮುಸಲ್ಮಾನ ಅಂಗಡಿಕಾರರು ನಗರ ಬಿಟ್ಟು ಪಲಾಯನ ಮಾಡಿದ್ದಾರೆ ಹಾಗೂ ಕೆಲವರಿಗೆ ಅಂಗಡಿ ಬಾಗಿಲು ತೆರೆಯಲು ಹೆದರಿಕೆ ಆಗುತ್ತಿದೆ.

(ಸೌಜನ್ಯ – TV9 Uttar Pradesh UttaraKhand)

ಉತ್ತರ ಕಾಶಿಯಲ್ಲಿನ ಮುಖ್ಯ ಪುರೋಲಾ ಮಾರುಕಟ್ಟೆಯಲ್ಲಿನ ಅಂಗಡಿಗಳ ಮೇಲೆ ಈ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಈ ಭಿತ್ತಿಪತ್ರಗಳ ಬಗ್ಗೆ ಪೊಲೀಸರು, ಅವರು ಭಿತ್ತಿಪತ್ರಗಳನ್ನು ಅಂಟಿಸುವವರನ್ನು ಹುಡುಕಲಾಗುತ್ತಿದೆ ಎಂದು ಹೇಳಿದ್ದಾರೆ. (ಹೇಗೆ ಪೊಲೀಸರು ಭಿತ್ತಿಪತ್ರಗಳನ್ನು ತತ್ಪರ್ತೆಯಿಂದ ತೆರವುಗೊಳಿಸಿದ್ದಾರೆ, ಅದೇ ತತ್ಪರತೆ ಲವ್ ಜಿಹಾದ್ ನಡೆಯದಂತೆ ಪ್ರಯತ್ನಿಸಬೇಕು ! – ಸಂಪಾದಕರು)

ಓರ್ವ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿರುವ ಆರೋಪದಲ್ಲಿ ಸ್ಥಳೀಯ ಅಂಗಡಿಯ ಉಬೇದ ಖಾನ್ ಮತ್ತು ಅವನ ಜೊತೆಗಾರ ಜಿತೇಂದ್ರ ಸೈನಿರನ್ನು ಮೇ ೨೭ ರಂದು ಬಂಧಿಸಲಾಗಿತ್ತು. ಈ ಪ್ರಕರಣ ‘ಲವ್ ಜಿಹಾದ್’ ಆಗಿದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ. ಈ ಘಟನೆಯ ನಂತರ ಕೆಲವು ಮುಸಲ್ಮಾನರ ಮನೆಗಳ ಮೇಲೆ ದಾಳಿ ಮಾಡಲಾಗಿತ್ತು.

ಸಂಪಾದಕೀಯ ನಿಲುವು

ಲವ್ ಜಿಹಾದ್ ನ ವಿರುದ್ಧ ಈ ಜನರು ಭವಿಷ್ಯದಲ್ಲಿ ದೇಶಾದ್ಯಂತ ಹರಡಿದರೇ ಆಶ್ಚರ್ಯ ಏನೂ ಇಲ್ಲ !

ಲವ್ ಜಿಹಾದ್ ವಿರುದ್ಧ ಚಕಾರವನ್ನೂ ಎತ್ತದ ಪ್ರಗತಿ(ಅಧೋ)ಪರರು ಈಗ ಹಿಂದೂಗಳ ವಿರುದ್ಧ ಮಾತನಾಡಿದರೆ, ಇದರಲ್ಲಿ ಆಶ್ಚರ್ಯ ಏನೂ ಇಲ್ಲ !