ಚಂಡೀಗಡ ಸರಕಾರಿ ಶಾಲೆಯಲ್ಲಿ 13 ವರ್ಷದ ವಿದ್ಯಾರ್ಥಿನಿಯ ಮೇಲೆ 5 ವಿದ್ಯಾರ್ಥಿಗಳಿಂದ ಅನೇಕ ಸಲ ಬಲಾತ್ಕಾರ

ಕಳ್ಳತನದ ಆರೋಪ ಹೊರಿಸಿ ಸುಮ್ಮನಿರುವಂತೆ ಬೆದರಿಕೆ !

ಚಂಡಿಗಡ (ಹರಿಯಾಣಾ) – ಇಲ್ಲಿಯ `ಮಾಡರ್ನ ಸ್ಕೂಲ’ ಹೆಸರಿನ ಒಂದು ಸರಕಾರಿ ಶಾಲೆಯ ಏಳನೇಯ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಅವಳದೇ ಶಾಲೆಯ ಕೆಲವು ವಿದ್ಯಾರ್ಥಿಗಳು ಅನೇಕ ಬಾರಿ ಬಲಾತ್ಕಾರ ಮಾಡಿರುವ ಆಘಾತಕಾರಿ ಘಟನೆ ಬಹಿರಂಗವಾಗಿದೆ. ಶಾಲೆಯಲ್ಲಿ ಹಾಗೆಯೇ ಶಾಲೆಯ ಹೊರಗೆ ಈ ಹೀನಕೃತ್ಯ ನಡೆದಿದೆಯೆಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಈ ಘಟನೆ ಮೇ 18 ರಂದು ಬಹಿರಂಗವಾಯಿತು. ಪೊಲೀಸರು ಈ ಪ್ರಕರಣದಲ್ಲಿ ದೂರನ್ನು ದಾಖಲಿಸಿದ್ದು, ಆರೋಪಿಗಳಿಗೆ ಬಾಲಸುಧಾರಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ.

13 ವರ್ಷದ ಸಂತ್ರಸ್ತ ವಿದ್ಯಾರ್ಥಿನಿಯ ಮೇಲೆ ಮೊದಲು ಅವಳದೇ ವರ್ಗದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯು ಬಲಾತ್ಕಾರ ಮಾಡಿದನು. ಆ ಸಮಯದಲ್ಲಿ ವಿದ್ಯಾರ್ಥಿಯು ಸಂತ್ರಸ್ತ ವಿದ್ಯಾರ್ಥಿನಿಯ ಮೇಲೆ ಕಳ್ಳತನದ ಆರೋಪವನ್ನು ಹೊರಿಸಿ ಅವಳನ್ನು ಸುಮ್ಮನಿರುವಂತೆ ಹೇಳಿದನು. ತದನಂತರ ಈಯತ್ತೆ 9ನೇ ತರಗತಿಯಲ್ಲಿ ಕಲಿಯುತ್ತಿರುವ 4 ವಿದ್ಯಾರ್ಥಿಗಳು ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಅವಳ ಮೇಲೆ ಬಲಾತ್ಕಾರ ಮಾಡಿದರು. ಈ ಘಟನೆಯ ವಿಷಯದಲ್ಲಿ ಮೊದಲು ಶಾಲೆಯ ಒಬ್ಬ ಶಿಕ್ಷಕಿಗೆ ಮಾಹಿತಿ ಸಿಕ್ಕಿತು. ಅವಳು ಪ್ರಾಚಾರ್ಯರಿಗೆ ಈ ವಿಷಯವನ್ನು ಹೇಳಿದ ಬಳಿಕ ಪೊಲೀಸರಿಗೆ, ಹಾಗೆಯೇ ಸಂತ್ರಸ್ತ ಕುಟುಂಬದವರಿಗೆ ಸೂಚನೆ ನೀಡಲಾಯಿತು ಐವರೂ ಆರೋಪಿಗಳನ್ನು ಬಾಲಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಸಂತ್ರಸ್ತಳಿಗೆ ಸಮಾಲೋಚನೆಯನ್ನು(ಕೌನ್ಸಿಲಿಂಗ) ನಡೆಸಲಾಗುತ್ತಿದೆ.

ಸಂಪಾದಕರ ನಿಲುವು

  • ಈ ಘಟನೆ ಯುವಪೀಳಿಗೆಯ ನೈತಿಕತೆ ಎಷ್ಟು ಅಧೋಗತಿಯಾಗಿದೆ ಎಂದು ತೋರಿಸುತ್ತದೆ ! ಮಕ್ಕಳಿಗೆ ಕೇವಲ ಭೌತಿಕ ಶಿಕ್ಷಣವನ್ನು ನೀಡಿರುವುದರ ಪರಿಣಾಮವೇ ಇದಾಗಿದೆ. ನಿಜವಾಗಿ ಅವರಿಗೆ ಧರ್ಮ ಮತ್ತು ಸಾಧನೆಯನ್ನು ಕಲಿಸಿ, ಅದನ್ನು ಅವರಿಂದ ಮಾಡಿಸಿಕೊಂಡಾಗಲೇ ಇಂತಹ ಘಟನೆಗಳು ನಿಲ್ಲಲು ಸಾಧ್ಯವಿದೆಯೆಂದು ನಾವೆಂದು ಗಮನಕ್ಕೆ ತೆಗೆದುಕೊಳ್ಳುತ್ತೇವೆ ?
  • ಅಪ್ತಾಪ್ತ ಆರೋಪಿಯ ಮೇಲೆ ಕಾನೂನಿನ ಅನ್ವಯ ಕ್ರಮ ಕೈಕೊಳ್ಳಲು ಸಾಧ್ಯವಿಲ್ಲ; ಆದರೆ ಇಂತಹ ಘಟನೆಗಳಿಂದ ಅವರ ಮೇಲೆಯೂ ಕ್ರಮ ಕೈಕೊಳ್ಳುವ ಆವಶ್ಯಕತೆಯಿದೆಯೆನ್ನುವುದು ಗಮನಕ್ಕೆ ಬರುತ್ತಿದೆ. ಅಧ್ಯಾತ್ಮಹೀನ ಕಾನೂನು ರಚಿಸುವ ಭಾರತೀಯ ವ್ಯವಸ್ಥೆಯು ಈ ಬಗ್ಗೆ ಏನು ಉತ್ತರಿಸಲಿದೆ ?