ಪ್ರತಿಯೊಬ್ಬ ಸನಾತನಿಗೆ ಹಿಂದೂ ರಾಷ್ಟ್ರ ಬೇಕಿದೆ ! – ಖ್ಯಾತ ಕಥೆಗಾರ್ತಿ ಜಯಾ ಕಿಶೋರಿ

ಕಥೆಗಾರ್ತಿ ಜಯ ಕಿಶೋರಿ

ಇಂದೋರ (ಮಧ್ಯಪ್ರದೇಶ) – ಸನಾತನಿಯಾಗಿರುವ ನನಗೆ ಹಿಂದೂ ರಾಷ್ಟ್ರ ಸಂಭವಿಸಿದರೆ ತುಂಬಾ ಸಂತೋಷವಾಗುತ್ತದೆ. ಅದರ ಬಗ್ಗೆ ಸರಕಾರ ಏನು ಮಾಡುತ್ತದೆಯೋ ಮಾಡಲಿದೆ; ಆದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಈ ಕೆಲಸಗಳನ್ನು ಮಾಡಬೇಕು. ಹಿಂದೂ ರಾಷ್ಟ್ರವಾಗಬೇಕೆಂಬುದು ಪ್ರತಿಯೊಬ್ಬ ಸನಾತನಿಯ ಬಯಕೆಯಾಗಿದೆ ಎಂದು ಖ್ಯಾತ ಕಥೆಗಾರ್ತಿ ಜಯಾ ಕಿಶೋರಿ ಇಲ್ಲಿ ಪ್ರತಿಪಾದಿಸಿದರು.

(ಸೌಜನ್ಯ – TV9 Madhya Pradesh Chhattisgarh)

ತಮ್ಮ ಮಾತನ್ನು ಮುಂದುವರೆಸುತ್ತಾ, ಧರ್ಮವನ್ನು ರಾಜಕೀಯಗೊಳಿಸಬಾರದು. ಮಹಾಭಾರತದಲ್ಲಿ, ಭಗವಾನ ಶ್ರೀಕೃಷ್ಣನು ತಾನೇ ಯುದ್ಧ ಮಾಡಬಹುದಾದರೂ, ಅವನು ಪಾಂಡವರನ್ನು ಯುದ್ಧ ಮಾಡಿಸಿಕೊಂಡನು. ಶ್ರೀಕೃಷ್ಣನಂತೆಯೇ ರಾಜಕೀಯ ಮಾಡಿದರೆ ತಪ್ಪಲ್ಲ. ದುರ್ಯೋಧನನೂ ರಾಜಕೀಯ ಮಾಡಿದ; ಆದರೆ ಅದು ಅಯೋಗ್ಯವಾಗಿತ್ತು. ಆದ್ದರಿಂದ ನೀವು ಯಾರಂತೆ ರಾಜಕೀಯ ಮಾಡಬೇಕೆಂದು ನಿರ್ಧರಿಸಬೇಕು ಎಂದು ಹೇಳಿದರು.