ಸನಾತನ ಧರ್ಮದ ರಕ್ಷಣೆಗಾಗಿ `ಮಾಲಾ’ (ಜಪಮಾಲೆ) ಮತ್ತು `ಭಾಲಾ’ (ಈಟಿ) ಎರಡರ ಆವಶ್ಯಕತೆ ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರ

ಪಾಟಲಿಪುತ್ರ (ಬಿಹಾರ) – ಭಗವಾನ ಹನುಮಂತನು ಶಾಸ್ತ್ರದ ಮತ್ತು ಶಸ್ತ್ರದ ಪ್ರತೀಕವಾಗಿದ್ದಾರೆ. ಸನಾತನ ಧರ್ಮದಲ್ಲಿ ಶಾಸ್ತ್ರ ಮತ್ತು ಶಸ್ತ್ರ ಇವೆರಡರ ಆವಶ್ಯಕತೆಯಿದೆ. ಶಾಸ್ತ್ರ ಮತ್ತು ಶಸ್ತ್ರ ಇವೆರಡರಲ್ಲಿ ಹೆಚ್ಚು ಅಂತರವಿಲ್ಲ. ಕೇವಲ ಒಂದು `ಆ’ಕಾರ ಸ್ವರವನ್ನು ತೆಗೆದರೆ ಶಾಸ್ತ್ರದ ಶಸ್ತ್ರವಾಗುತ್ತದೆ. ಸನಾತನ ಧರ್ಮದ ರಕ್ಷಣೆಗಾಗಿ `ಮಾಲಾ’ (ಜಪಮಾಲೆ) ಮತ್ತು `ಭಾಲಾ’ (ಈಟಿ) ಇವೆರಡರ ಆವಶ್ಯಕತೆಯಿದೆ ಎಂದು ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಇಲ್ಲಿಯ ಹನುಮಂತ ಕಥೆಯ ಸಮಾರೋಪದ ಸಮಯದಲ್ಲಿ ಉಪಸ್ಥಿತರಿದ್ದ ಲಕ್ಷಾಂತರ ಭಕ್ತರಿಗೆ ಮಾರ್ಗದರ್ಶನ ಮಾಡುವಾಗ ಹೇಳಿದರು. 5 ದಿನಗಳ ಅವರ ಈ ಕಥೆಯ ಸಮಾರೋಪದ ಬಳಿಕ ಅವರು ಪುನಃ ಬಾಗೇಶ್ವರ ಧಾಮಕ್ಕೆ ಮರಳಿದರು. ಪಾಟಲಿಪುತ್ರದಲ್ಲಿ ಅವರ ಪೋಸ್ಟರ್ ಗೆ ಕಪ್ಪು ಮಸಿ ಬಳಿಸಿರುವ ಘಟನೆಯ ಬಗ್ಗೆ `ಪೋಸ್ಟರ್ ಗಳನ್ನು ಹರಿಯಬಹುದು; ಆದರೆ ನೀವು ಜನರ ಹೃದಯದಿಂದ ಹೇಗೆ ತೆಗೆಯುತ್ತೀರಿ?’ ಎಂದು ಅವರು ಪ್ರಶ್ನಿಸಿದರು.