
ಗಾಝಿಯಾಬಾದ (ಉತ್ತರಪ್ರದೇಶ) – ಉತ್ತರಪ್ರದೇಶದ ಗಾಝಿಯಾಬಾದಿನ ಪೊಲೀಸರು ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಮೋಸಗೊಳಿಸಿರುವ ಪ್ರಕರಣದಲ್ಲಿ ಪಾದ್ರಿ, ಆತನ ಪತ್ನಿಯೊಂದಿಗೆ ಇನ್ನೂ ಮೂವರನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಸ್ಥಳೀಯ ಭಾಜಪದ ಮಹಿಳಾ ನಾಯಕಿಯಾದ ಸುನೀತಾ ಆರೋರಾರವರು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರು. ಈ ದೂರಿನಲ್ಲಿ `ನನ್ನನ್ನು ಬ್ಯೂಟಿ ಪಾರ್ಲರಿಗೆ ಕರೆಯಿಸಿ ನನ್ನ ಮತಾಂತರ ಮಾಡುವ ಸಂಚು ನಡೆದಿತ್ತು. ಅಲ್ಲಿ ಹೋದಾಗ ನನ್ನ ಕೊರಳಿನಲ್ಲಿದ್ದ ಶ್ರೀಕೃಷ್ಣನ ಪದಕವನ್ನು ತೆಗೆದರು. ನಾನು ಬ್ಯೂಟಿ ಪಾರ್ಲರನ್ನು ತಲುಪಿದಾಗ ಅಲ್ಲಿದ್ದ 6 ಜನರು ಕೈಯಲ್ಲಿ ಪುಸ್ತಕಗಳನ್ನು ಹಿಡಿದುಕೊಂಡು ಪ್ರಾರ್ಥನೆ ಮಾಡುತ್ತಿದ್ದರು. ಪಾದ್ರಿ ಇಬ್ರಾಹಿಮ ಥಾಮಸ್ ಜನರನ್ನು ಅಲ್ಲಿಗೆ ಪ್ರಾರ್ಥನೆಗಾಗಿ ಕರೆದುಕೊಂಡು ಹೋಗುತ್ತಿದ್ದರು.
गाजियाबाद में पादरी सहित तीन गिरफ्तार: BJP कार्यकत्री को ब्यूटी पार्लर बुलाकर धर्मांतरण के लिए बरगलाया, गले से श्रीकृष्ण का लॉकेट उतरवायाhttps://t.co/be0d8XpeWT#Ghaziabad #uttarpradeshnews pic.twitter.com/H3fW4WohjX
— Dainik Bhaskar (@DainikBhaskar) May 15, 2023
ಇಬ್ರಾಹಿಮನು ನನ್ನ ಕೊರಳಿನಲ್ಲಿದ್ದ ಭಗವಾನ ಶ್ರೀಕೃಷ್ಣನ ಪದಕವನ್ನು ತೆಗೆಯಲು ಹೇಳಿದನು. ಇಷ್ಟೇ ಅಲ್ಲ, ಅವನು ನನಗೆ ನನ್ನ ಮನೆಯಲ್ಲಿರುವ ದೇವತೆಗಳ ಚಿತ್ರಗಳನ್ನು ತೆಗೆಯುವಂತೆ ಹೇಳಿದರು. ಪಾದ್ರಿಯು ಇದೆಲ್ಲವನ್ನು ಮಾಡಿದ ನಂತರ ಏಸು ಕ್ರಿಸ್ತನ ದರ್ಶನವಾಗಲಿದೆ ಎಂದು ಹೇಳಿದ್ದನು’ ಎಂದು ಸುನೀತಾರವರು ಆರೋಪಿಸಿದ್ದಾರೆ. ಇದು ಮತಾಂತರದ ಪ್ರಕರಣವಾಗಿದೆ ಎಂಬುದು ಸುನೀತಾ ಅರೋರಾರವರ ಗಮನಕ್ಕೆ ಬಂದಿತು. ಅವರು ತಮ್ಮ ಕೆಲವು ಸಹೋದ್ಯೋಗಿಗಳನ್ನು ಘಟನಾಸ್ಥಳಕ್ಕೆ ಕರೆಸಿಕೊಂಡರು. ಅನಂತರ ಅವರು ಮೂವರು ಆರೋಪಿಗಳನ್ನು ಹಿಡಿದು ಖೋಡಾ ಪೊಲೀಸ ಠಾಣೆಗೆ ಕರೆದೊಯ್ದರು. ಪೊಲೀಸರು ಆರೋಪಿಗಳ ವಿರುದ್ಧ ದೂರನ್ನು ದಾಖಲಿಸಿ ಅವರನ್ನು ಬಂಧಿಸಿದರು. ಈ ಪ್ರಕರಣದಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಸಂಪಾದಕೀಯ ನಿಲುವುಪ್ರೀತಿ ಮತ್ತು ಶಾಂತಿಯ ಸಂದೇಶ ನೀಡುವ ಪಾದ್ರಿಗಳ ನಿಜ ಸ್ವರೂಪ ! ಭಾರತಾದ್ಯಂತ ಮತಾಂತರ ವಿರೋಧಿ ಕಾನೂನು ರಚಿಸುವುದು ಎಷ್ಟು ಆವಶ್ಯಕವಾಗಿದೆ ಎಂಬುದು ಈ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ. |
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು