ಅಮೃತಸರದ ಸ್ವರ್ಣ ಮಂದಿರದ ಸಮೀಪದ `ಹೆರಿಟೇಜ ಸ್ಟ್ರೀಟ್’ ನಲ್ಲಿ ಪುನಃ ಸ್ಫೋಟ !

ಅಮೃತಸರ – ಇಲ್ಲಿಯ ಪ್ರಸಿದ್ಧ ಸ್ವರ್ಣ ಮಂದಿರದ ಸಮೀಪದ `ಹೆರಿಟೇಜ ಸ್ಟ್ರೀಟ’ ನಲ್ಲಿ ಮೇ 8 ರಂದು ಬೆಳಿಗ್ಗೆ 6 ಗಂಟೆಗೆ ಮತ್ತೊಮ್ಮೆ ಸ್ಫೋಟವಾಗಿದೆ. ಬೆಳಗ್ಗಿನ ಸಮಯವಾಗಿದ್ದರಿಂದ ಈ ಮಾರ್ಗದಲ್ಲಿ ಯಾರೂ ಇರಲಿಲ್ಲದ್ದರಿಂದ ಯಾವುದೇ ಜೀವಹಾನಿಯಾಗಿಲ್ಲ. ಕಳೆದ 32 ಗಂಟೆಯಲ್ಲಿ ಇದು 2 ನೇ ಸ್ಫೋಟವಾಗಿದೆ. ವಿಶೇಷವೆಂದರೆ ಎರಡೂ ಸ್ಫೋಟಗಳು ಒಂದೇ ಸ್ಥಳದಲ್ಲಿ ನಡೆದಿದೆ.
ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಬೆಳಿಗ್ಗೆ ಸ್ಫೋಟದ ಮಾಹಿತಿ ಸಿಗುತ್ತಲೇ ಪೊಲೀಸ ಆಯುಕ್ತ ನೌನಿಹಾಲ ಸಿಂಹ ಇವರು ಸ್ವತಃ ಘಟನಾಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದರು. ತದನಂತರ ಅಮೃತಸರ ಪೊಲೀಸರ ಬಾಂಬ್ ಪರೀಕ್ಷಾ ದಳ ಮತ್ತು ವಿಧಿವಿಜ್ಞಾನ ತಂಡದವರೂ ಘಟನಾಸ್ಥಳದ ತಪಾಸಣೆ ನಡೆಸಿದರು. ಮೊದಲ ಸ್ಫೋಟದಲ್ಲಿ ವಾಹನ ನಿಲುಗಡೆಯ ಗಾಜು ಒಡೆದಿದ್ದರಿಂದ 5-6 ಭಕ್ತರು ಗಾಯಗೊಂಡಿದ್ದರು.