ತೇಲಂಗಾಣದಲ್ಲಿ ಭಾಜಪ ಸರಕಾರ ಬಂದರೆ ಮುಸಲ್ಮಾನರ ಮೀಸಲಾತಿ ರದ್ದುಗೊಳಿಸುವೆವು ! – ಅಮೀತ್ ಶಾಹ

ಕೇಂದ್ರ ಗೃಹಸಚಿವ ಅಮಿತ ಶಹಾ ಇವರ ಖಂಡತುಂಡಾಗಿ ಪ್ರತಿಪಾದನೆ

ಕೇಂದ್ರ ಗೃಹಸಚಿವ ಅಮಿತ ಶಹಾ

ಭಾಗ್ಯನಗರ (ತೇಲಂಗಾಣಾ) – ತೇಲಂಗಾಣದಲ್ಲಿ ಭಾಜಪದ ಸರಕಾರ ಬಂದರೆ ರಾಜ್ಯದಲ್ಲಿ ಮುಸಲ್ಮಾನರಿಗೆ ನೀಡಲಾಗಿರುವ ಮೀಸಲಾತಿಯನ್ನು ರದ್ದುಗೊಳಿಸುತ್ತೇವೆ ಎಂದು ಕೇಂದ್ರ ಗೃಹಸಚಿವ ಅಮಿತ ಶಹಾ ಇವರು ರಾಜ್ಯದ ಚೆವಲ್ಲಾದಲ್ಲಿ ಆಯೋಜಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದರು.

ಈ ಸಂದರ್ಭದಲ್ಲಿ ಶಹಾ ಇವರು ಮಾತನಾಡುತ್ತಾ, “ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇವರ ಭ್ರಷ್ಟ ಸರಕಾರದ ಕೌಂಟ್ ಡೌನ್ ಪ್ರಾರಂಭವಾಗಿದೆ. ವಾಹನ ಇದು ಅವರ ಪಕ್ಷದ ಭಾರತ ರಾಷ್ಟ್ರ ಸಮಿತಿಯ ಚುನಾವಣೆಯ ಚಿಹ್ನೆಯಾಗಿದೆ. ಈ ವಾಹನದ `ಸ್ಟಿಯರಿಂಗ್’ ಎಮ್.ಆಯ್.ಎಮ್. ಹತ್ತಿರ (ಅಸದುದ್ದೀನ ಓವೈಸಿ ಇವರ ಪಕ್ಷದ ಬಳಿ) ಇದೆ. ಅಂದರೆ ವಾಹನ ಚಲಿಸುತ್ತಿರುವ ದಿಕ್ಕು ಸರಿಯಾಗಿದೆಯೇ ? ಈ ಜನರು (ಅಸದುದ್ದೀನ ಓವೈಸಿ) ಭಾರತದ ನಕ್ಷೆಯನ್ನು ರಚಿಸುತ್ತಾರೆ ಮತ್ತು ಅದರಲ್ಲಿ ಕಾಶ್ಮೀರವನ್ನು ಸ್ವತಂತ್ರ ದೇಶವೆಂದು ತೋರಿಸುತ್ತಾರೆ ಎಂದು ಹೇಳಿದರು.

ಸಂಪಾದಕರ ನಿಲುವು

ಇದರೊಂದಿಗೆ ಗೃಹಸಚಿವ ಶಹಾ ಆದಷ್ಟು ಬೇಗನೆ ರಾಷ್ಟ್ರಮಟ್ಟದಲ್ಲಿ ಅಲ್ಪಸಂಖ್ಯಾತರ ಓಲೈಕೆಯನ್ನು ನಷ್ಟಗೊಳಿಸುವ `ಸಮಾನ ನಾಗರಿಕ ಸಂಹಿತೆ’ ಜಾರಿಗೊಳಿಸಲು ಪ್ರಯತ್ನಿಸಬೇಕು, ಎಂದು ರಾಷ್ಟ್ರಪ್ರೇಮಿ ಜನತೆಗೆ ಅನಿಸುತ್ತದೆ !