‘ಜೈಲಿನಿಂದ ಹೊರ ಬಂದ ಕೂಡಲೇ ಪೊಲೀಸರನ್ನು ನೋಡಿಕೊಳ್ಳುವೆ ! – ಗೂಂಡಾ ಅತೀಕ್ ಅಹಮದ್

ಮಗನನ್ನು ಎನ್ ಕೌಂಟರ್ ಮಾಡಿದ ಪೊಲೀಸರಿಗೆ ಜೈಲಿನಿಂದಲೇ ಬೆದರಿಕೆ ಹಾಕಿದ ಗೂಂಡಾ ಅತಿಕ ಅಹಮದ !

ಗೂಂಡಾ ಅತಿಕ್ ಅಹಮದ್

ಪ್ರಯಾಗರಾಜ (ಉತ್ತರಪ್ರದೇಶ) – ಕುಖ್ಯಾತ ಗೂಂಡಾ ಅತಿಕ್ ಅಹಮದ್ ಇವನ ೧೯ ವರ್ಷದ ಅಸದ ಎಂಬ ಮೂರನೆ ಮಗನನ್ನು ಪೊಲೀಸರ ವಿಶೇಷ ಕೃತಿ ಪಡೆಯು ಎನ್ ಕೌಂಟರ್ ಮಾಡಿದ ನಂತರ ಅತಿಕ್ ನು ಪೊಲೀಸರಿಗೆ ಬೆದರಿಕೆ ನೀಡಿರುವ ವಾರ್ತೆ ‘ಟೈಮ್ಸ್ ನೌ’ ಈ ವಾರ್ತಾ ವಾಹಿನಿಯು ಪ್ರಸಾರ ಮಾಡಿದೆ. ‘ನಾನು ಜೈಲಿನಿಂದ ಹೊರಗೆ ಬಂದ ಕೂಡಲೇ, ಯಾವ ಪೊಲೀಸ ಅಧಿಕಾರಿ ಅಸದನನ್ನು ಕೊಂದಿದ್ದಾರೆ, ಅವರಿಗೆ ತೋರಿಸುತ್ತೇನೆ ಕುರ್ಚಿ ಏನು ಇರುತ್ತದೆ ?’, ಎಂದು ಬೆದರಿಕೆ ನೀಡಿದ್ದಾನೆಂದು ವಾರ್ತೆಯಲ್ಲಿ ತಿಳಿಸಲಾಗಿದೆ. ಈ ಹಿಂದೆ ಅತಿಕ್ ನಿಗೆ ಅಸದನನ್ನು ಕೊಂದಿರುವ ಬಗ್ಗೆ ಹೇಳಿದಾಗ ಅವನು ನ್ಯಾಯಾಲಯದಲ್ಲಿದ್ದನು. ಅಲ್ಲಿಯೇ ಅವನು ಅಳುತ್ತಿದ್ದನು.

ಸಂಪಾದಕೀಯ ನಿಲುವು

ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರೂ ಕೂಡ ಅಪರಾಧಿ ಪ್ರವೃತ್ತಿ ನಾಶವಾಗುವುದಿಲ್ಲ, ಇದನ್ನು ನೋಡಿದರೆ ಇಂತಹ ಗೂಂಡಾಗಳಿಗೆ ಜೀವಾವಧಿ ಅಲ್ಲ ಗಲ್ಲು ಶಿಕ್ಷೆ ವಿಧಿಸುವುದು ಅವಶ್ಯಕ, ಹೀಗೆ ಯಾರಿಗೆ ಬೇಕಾದರೂ ಅನಿಸಬಹುದು !

 

  • ಮಗನನ್ನು ಕೊನೆಯ ಬಾರಿ ನೋಡಲು ಅವಕಾಶ ನೀಡದೆ ಇದ್ದರಿಂದ ಅತಿಕ ಅಹಮದನ ಕೂಗಾಟ

  • ‘ಅಲ್ಲಾ ನಿಮ್ಮನ್ನು ಕ್ಷಮಿಸುವುದಿಲ್ಲ !’ (ಅಂತೆ)

ಅಸದ್ ಇವನ ಶವ ಏಪ್ರಿಲ್ ೧೫ ರಂದು ಪ್ರಯಾಗರಾಜದಲ್ಲಿ ಹೂಳಲಾಯಿತು. ಆ ಸಮಯದಲ್ಲಿ ಅವನ ಅಜ್ಜ ಮತ್ತು ಇತರ ಸಂಬಂಧಿಕರು ಉಪಸ್ಥಿತರಿದ್ದರು. ಎಲ್ಲರ ಗುರುತಿನ ಚೀಟಿ ಪರಿಶೀಲಿಸಿ ಅವರಿಗೆ ಕಬ್ರಸ್ತಾನದಲ್ಲಿ ಪ್ರವೇಶ ನೀಡಲಾಯಿತು. ಎಲ್ಲರ ಮಾಹಿತಿ ಪಡೆದು ಮತ್ತು ಛಾಯಾಚಿತ್ರ ತೆಗೆದರು. ಈ ಸಮಯದಲ್ಲಿ ಡ್ರೋನ್ ಮೂಲಕ ನಿಗಾ ವಹಿಸಲಾಗಿತ್ತು. ಅತಿಕನಿಗೆ ಕೂಡ ಇಲ್ಲಿ ಬರಬೇಕಿತ್ತು, ಆದರೆ ಅವನಿಗೆ ಅನುಮತಿ ನೀಡದೆ ಇರುವುದರಿಂದ ಅಸಮಾಧಾನಗೊಂಡನು. ‘ನನಗೆ ನನ್ನ ಮಗನನ್ನು ಒಂದು ಸಾರಿ ನೋಡಲು ಬಿಡಿ. ಟಿವಿ ಅಥವಾ ಮೊಬೈಲ್ ಮೂಲಕ ಅವನನ್ನು ಕೊನೆಯ ಬಾರಿ ನೋಡಲು ಬಿಡಿ. ಮಗನನ್ನು ನೋಡುವುದು ನನ್ನ ಅಧಿಕಾರವಾಗಿದೆ. ಅಲ್ಲಾ ಎಲ್ಲವನ್ನು ನೋಡುತ್ತಿದ್ದಾನೆ. ಅಲ್ಲಾ ನಿಮಗೆ ಕ್ಷಮಿಸಲಾರ. ನೀವು ನನ್ನ ಕುಟುಂಬವನ್ನು ಮುಗಿಸುತ್ತಿದ್ದಿರ’, ಈ ರೀತಿಯ ಹೇಳಿಕೆ ನೀಡಿದ್ದಾನೆಂದು ‘ಝೀ ನ್ಯೂಸ್’ನಲ್ಲಿ ತೋರಿಸಲಾಯಿತು.

ಸಂಪಾದಕೀಯ ನಿಲುವು

ಯಾರನ್ನು ಅತಿಕ ಕೊಂದಿದ್ದನು, ಯಾರ ಸಂಪತ್ತಿಯ ಲೂಟಿ ಮಾಡಿದ್ದನು, ಆ ಜನರ ಶಾಪದಿಂದ ಅವನ ಈ ಸ್ಥಿತಿ ಆಗಿದೆ. ಗೂಂಡಾಗಳಿಗೆ ಈ ರೀತಿಯ ಶಿಕ್ಷೆ ಎಲ್ಲಾ ಕಡೆ ವಿಧಿಸಿದರೆ ಅಪರಾಧ ಮಾಡುವ ಧೈರ್ಯ ಯಾರು ಮಾಡಲಾರರು !