
ಇಂಪಾಲ (ಮಣಿಪುರ) – ಮಣಿಪುರದಲ್ಲಿನ ಥೌಬಲ್ ಜಿಲ್ಲೆಯಲ್ಲಿ ಜನವರಿ ೨೪ ರಂದು ಭಾಜಪದ ರಾಜ್ಯ ಯುನಿಟಿಯ ಮಾಜಿ ಸೈನಿಕ ಸೇಲ್ ನ ಸಂಯೋಜಕ ಲೈಶರಾಮ ರಾಮೇಶ್ವರ ಸಿಂಹ ಇವರನ್ನು ಅವರ ನಿವಾಸ ಸ್ಥಳದ ಪ್ರವೇಶ ದ್ವಾರದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ನಂತರ ಮುಖ್ಯ ಆರೋಪಿ ಪೊಲೀಸರೆದುರು ಸೆರೆಂಡರ್ ಆದನು. ಈ ಪ್ರಕರಣದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
Manipur BJP leader shot dead in Imphal, one held https://t.co/nEyXXRnRD6
— TOI Cities (@TOICitiesNews) January 25, 2023
ತೌಬಲ್ ಪೊಲೀಸ ಅಧಿಕಾರಿ ಹಾಬಿಜಮ ಜೋಗೇಶಚಂದ್ರ ಇವರು, ಬೆಳಿಗ್ಗೆ ೧೧ ಗಂಟೆಗೆ ನೋಂದಣಿ ಸಂಖ್ಯೆ ಇಲ್ಲದಿರುವ ಕಾರ್ ನಿಂದ ಇಬ್ಬರು ಬಂದಿದ್ದರು ಮತ್ತು ಅವರು ಸಿಂಹ ಇವರ ಮೇಲೆ ಗುಂಡಿನ ದಾಳಿ ನಡೆಸಿದರು. ಸಿಂಹ ಇವರ ಎದೆಗೆ ಗುಂಡು ತಾಗಿದ್ದರಿಂದ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಸೇರಿಸಿದರು. ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಮೃತಪಟ್ಟರು. ವಾಹನ ಚಾಲಕ ನೌರೇಮ್ ರಿಕಿ ಪಾಯಿಂಟಿಂಗ್ ಸಿಂಹ ಮತ್ತು ಗುಂಡಿನ ದಾಳಿ ಮಾಡಿದ ಆಯೇಕಪಮ ಕೇಶೋರಜಿತ ಇವರನ್ನು ಬಂಧಿಸಿದರು. ಕೇಶೋರಜಿತನಿಂದ ಒಂದು ಅನುಮತಿ ಇಲ್ಲದ ಪಿಸ್ತುಲ್, ೨ ಮ್ಯಾಗಝಿನ್ ಮತ್ತು ೯ ಕಾಟ್ರೇಜ್ ವಶ ಪಡಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಈ ಹತ್ಯೆಯ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ.
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ