ಆಫ್ತಾಬ ಪುನವಾಲಾನು ಗರಗಸದಿಂದ ಶ್ರದ್ಧಾಳ ಮೃತ ದೇಹದ ೩೫ ತುಂಡುಗಳನ್ನಾಗಿ ಮಾಡಿದ್ದ ! – ಶವ ಪರೀಕ್ಷೆಯ ವರದಿ

ನವ ದೆಹಲಿ – ಶ್ರದ್ಧಾ ವಾಲಕರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರದ್ಧಾಳ ಶವ ಪರೀಕ್ಷೆಯ ವರದಿ ಬೆಳಕಿಗೆ ಬಂದಿದೆ. ಅದರಲ್ಲಿ ಆಫ್ತಾಬನು ಶ್ರದ್ಧಾಳ ಕತ್ತು ಹಿಸಿಕ ಹತ್ಯೆ ಮಾಡಿದ ನಂತರ ಗರಗಸದಿಂದ ಶವವನ್ನು ೩೫ ತುಂಡುಗಳನ್ನಾಗಿ ಮಾಡಿರುವುದು ಬೆಳಕಿಗೆ ಬಂದಿದೆ. ಆಫ್ತಾಬ್ ಪ್ರತಿದಿನ ಒಂದೊಂದು ತುಂಡು ಮಾಡಿ ಕಾಡಿಗೆ ಹೋಗಿ ಎಸೆಯುತ್ತಿದ್ದನು. ಎಲ್ಲಿ ತುಂಡುಗಳನ್ನು ಎಸೆಯಲಾಗಿತ್ತೋ ಅಲ್ಲಿಂದ ಮೂಳೆಗಳನ್ನು ಸಂಗ್ರಹಿಸಲಾಯಿತು, ಪೊಲೀಸರಿಗೆ ಒಟ್ಟು ೨೩ ಮೂಳೆಗಳು ದೊರೆತಿದೆ. ಅದರ ಪರೀಕ್ಷಣೆಯಿಂದ ಅವು ಶ್ರದ್ಧಾಳದ್ದೇ ಇರುವುದು ತಿಳಿದು ಬಂದಿದೆ. ಈ ಮೂಳೆಗಳಿಂದ ಶವ ಪರೀಕ್ಷೆಯ ವರದಿ ಕೂಡ ಸಿದ್ಧಪಡಿಸಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಶ್ರದ್ಧಾಳ ಮೂಳೆಯ ಮೇಲೆ ಗರಗಸದಿಂದ ಕತ್ತರಿಸಿರುವ ಗುರುತುಗಳ ಸಿಕ್ಕಿದೆ.