(ಪ್ಲೇಟ್ಲೆಟ್ಸ್ ಎಂದರೆ ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುವ ಸಣ್ಣ ರಕ್ತ ಕಣಗಳು)

ಪ್ರಯಾಗರಾಜ (ಉತ್ತರ ಪ್ರದೇಶ) – ನಕಲಿ ಪ್ಲೇಟ್ಲೆಟ್ಗಳನ್ನು ಮಾರುವ ಮೂಲಕ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುವ ಗುಂಪನ್ನು ಪತ್ತೆ ಹಚ್ಚಲಾಗಿದೆ. ಗ್ಯಾಂಗ್ನ ನಾಯಕನೂ ಸೇರಿದಂತೆ ೧೦ ಜನರನ್ನು ಪೊಲೀಸರು ಬಂಧಿಸಿದರು. ಆರೋಪಿಗಳಿಂದ ೧೮ ಚೀಲ ಪ್ಲಾಸ್ಮಾ (ರಕ್ತಕಣಗಳು ಯಾವುದರಲ್ಲಿ ತೇಲುತ್ತವೆಯೋ ಆ ಬಣ್ಣರಹಿತ ಭಾಗ), ೩ ಚೀಲ ನಕಲಿ ಪ್ಲೇಟ್ ಲೆಟ್ಸ್ ಹಾಗೂ ಒಂದು ಲಕ್ಷದ ಎರಡು ಸಾವಿರ ನಗದು ವಶಪಡಿಸಿಕೊಳ್ಳಲಾಯಿತು. ಅಲ್ಲದೆ ಆರೋಪಿಗಳಿಂದ ೩ ದ್ವಿಚಕ್ರ ವಾಹನಗಳು ಹಾಗೂ ೧೩ ಸಂಚಾರವಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.
Uttar Pradesh | Acting on a tip-off, 10 people have been arrested for selling fake platelets. These people used to take plasma from the blood banks, fill it in different pouches, put stickers of platelets & sell it to the needy people: Shailesh Kumar Pandey,SSP, Prayagraj (21.10) pic.twitter.com/fwNtnag4J1
— ANI UP/Uttarakhand (@ANINewsUP) October 21, 2022
೧. ರಾಘವೇಂದ್ರ ಸಿಂಗ ಅಲಿಯಾಸ್ ರಾಹುಲ ಪಟೇಲ ಈ ಗ್ಯಾಂಗ್ ನ ನಾಯಕ. ಆತ ಇತರ ಆರೋಪಿಗಳನ್ನು ಜೊತೆಗೆ ಸೇರಿಸಿಕೊಂಡು ಕೆಲಸ ಮಾಡುತ್ತಿದ್ದ.
೨. ಆರೋಪಿಗಳು ರಕ್ತನಿಧಿಯಿಂದ ಪ್ಲಾಸ್ಮಾ ಖರೀದಿಸುತ್ತಿದ್ದರು ಎಂದು ಹಿರಿಯ ಪೊಲೀಸ ವರಿಷ್ಠಾಧಿಕಾರಿ ಶೈಲೇಶ ಕುಮಾರ ಪಾಂಡೆ ತಿಳಿಸಿದ್ದಾರೆ. ಒಂದು ಚೀಲದಲ್ಲಿ ೩೫೦ ಮಿಲಿ ಪ್ಲಾಸ್ಮಾ ಇರುತ್ತದೆ. ಇದಾದ ಬಳಿಕ ಖಾಲಿ ಚೀಲದಲ್ಲಿ ೫೦-೫೦ ಮಿಲಿ ಪ್ಲಾಸ್ಮಾ ತುಂಬಿಸಿ ಪ್ಲೇಟ್ಲೆಟ್ಸ್ ಎಂದು ೩ ರಿಂದ ೫ ಸಾವಿರ ರೂಪಾಯಿಗೆ ಮಾರಲಾಗುತ್ತಿತ್ತು. ಗುಂಪಿನ ಸದಸ್ಯರಿಗೆ ವಿವಿಧ ಕಾರ್ಯಗಳನ್ನು ಒಪ್ಪಿಸಲಾಗಿತ್ತು. ಕೆಲವರು ಪ್ಲಾಸ್ಮಾವನ್ನು ತರುವ ಕೆಲಸ ಮಾಡುತ್ತಿದ್ದರಾದರೆ, ಇನ್ನು ಕೆಲವರು ರೋಗಿಗಳನ್ನು ಹುಡುಕುವ ಕೆಲಸ ಮಾಡುತ್ತಿದ್ದರು.
ಗ್ಲೋಬಲ್ ಹಾಸ್ಪಿಟಲ್ಸ್ ಜೊತೆಗಿನ ಸಂಬಂಧದ ಬಗ್ಗೆ ತನಿಖೆ
ಝಾಲವಾದಲ್ಲಿನ, ಈಗ ಮುಚ್ಚಲಾಗಿರುವ ಗ್ಲೋಬಲ್ ಆಸ್ಪತ್ರೆ ಮತ್ತು ಟ್ರಾಮಾ ಸೆಟ್ಟರ್ನೊಂದಿಗೆ ನಕಲಿ ಪ್ಲೇಟ್ಲೆಟ್ಸ್ ಮಾರುವ ಗುಂಪಿಗೂ ಏನಾದರೂ ಸಂಬಂಧವಿದೆಯೇ ಎಂಬುದರ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಪಾಂಡೆ ಹೇಳಿದ್ದಾರೆ. ‘ಆಸ್ಪತ್ರೆಯ ಕೆಲ ಸಿಬ್ಬಂದಿ ನಮ್ಮ ಸಂಪರ್ಕದಲ್ಲಿದ್ದರು’, ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಸಿಬ್ಬಂದಿಗಳ ಮೂಲಕ ಪ್ಲೇಟ್ಲೆಟ್ಸ್ ನ ಅವಶ್ಯಕತೆಯಿರುವ ಅನೇಕರು ಆರೋಪಿಗಳನ್ನು ಸಂಪರ್ಕಿಸುತ್ತಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧೀಕ್ಷಕ ಪಾಂಡೆ ತಿಳಿಸಿದ್ದಾರೆ.
‘ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್’ ಸಂಸ್ಥೆಗೆ ಗ್ರಾಹಕನಿಗೆ ೫೦ ಸಾವಿರ ರೂಪಾಯಿ ನಷ್ಟ ಪರಿಹಾರ ನೀಡುವಂತೆ ಆದೇಶ : Hindustan Unilever Compensation
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
ಪ್ರಸಿದ್ಧ ಚಲನಚಿತ್ರ ನಟ ಚಿನ್ಮಯ ಉದಗೀರಕರ ಮತ್ತು ನಟಿ ಮೋಹಿನಿ ಪೋತದಾರ ಅವರಿಂದ ಸನಾತನದ ಆಶ್ರಮಕ್ಕೆ ಸೌಹಾರ್ದಯುತ ಭೇಟಿ!
ಛತ್ತೀಸ್ಗಢದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಾರಸ್ದಾರಿಯ ಸಂರಕ್ಷಣೆಗಾಗಿ ರಾಜ್ಯ ಸರಕಾರದಿಂದ ಸನಾತನ ಸಂಸ್ಥೆಗೆ ಬೆಂಬಲ ! ಮುಖ್ಯಮಂತ್ರಿ ವಿಷ್ಣುದೇವ ಸಾಯ
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case